ಮಂಗಳೂರು : ಭಟ್ಟಿ ಸಾರಾಯಿ ಘಟಕಕ್ಕೆಅಬಕಾರಿ ಇಲಾಖೆ ದಾಳಿ 

Spread the love

ಭಟ್ಟಿ ಸಾರಾಯಿ ಘಟಕಕ್ಕೆ ಅಬಕಾರಿ ಇಲಾಖೆ ದಾಳಿ 

ಮಂಗಳೂರು :-ಅಬಕಾರಿ ಇಲಾಖೆ ಅಧಿಕಾರಿಗಳು, ಮಂಗಳೂರಿನ ಜಪ್ಪಿನಮೊಗರುಗ್ರಾಮದ ನ್ಯೂ ಪಡ್ಪು ಎಂಬಲ್ಲಿ ರಿಚರ್ಡ್‍ಡಿಸೋಜಾ ಎಂಬವರ ಮನೆ ವಠಾರಕ್ಕೆ ದಾಳಿ ನಡೆಸಿ, ಅಕ್ರಮವಾಗಿ ಭಟ್ಟಿ ಸಾರಾಯಿ ತಯಾರಿಸುತ್ತಿದ್ದುದನ್ನು ಪತ್ತೆ ಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಮೂರುವರೆ ಲೀಟರ್ ಲೀಟರ್ ಭಟ್ಟಿ ಸಾರಾಯಿಮತ್ತು ಭಟ್ಟಿ ಸಾರಾಯಿತಯಾರಿಕಾ ಸಾಮಾಗ್ರಿಗಳನ್ನು ಜಫ್ತಿ ಮಾಡಿ ಪ್ರಕರಣದಾಖಲಿಸಲಾಗಿದೆ..

ದ.ಕ.ಜಿಲ್ಲಾಅಬಕಾರಿ ಡಿಸಿ ಶೈಲಜಾ ಕೋಟೆ, ಡಿವೈಎಸ್‍ಪಿ ಶಿವಪ್ರಸಾದ್‍ಅವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ವಲಯ 2ರ ಅಬಕಾರಿಇನ್ಸ್ಸ್‍ಪೆಕ್ಟರ್‍ರತ್ನಾಕರರೈಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿಉಪನಿರೀಕ್ಷಕ ಆಶಿಸ್, ಸಿಬ್ಬಂದಿಗಳಾದ ಬಸವರಾಜತೋರೆ, ನವೀನ್ ನಾಯ್ಕ್ ಮತ್ತುಚಾಲಕ ಹರಿಯಪ್ಪಇದ್ದರು.


Spread the love