ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು, ಕೋಮು ಪ್ರಚೋದಕ ಸಂದೇಶ ಹಂಚಿದ ಇಬ್ಬರು ಬಂಧನ

Spread the love

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು, ಕೋಮು ಪ್ರಚೋದಕ ಸಂದೇಶ ಹಂಚಿದ ಇಬ್ಬರು ಬಂಧನ

ಮಂಗಳೂರು: ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ಮೂಲಕ ಬ್ಯಾರಿ ಭಾಷೆಯಲ್ಲಿ ಸಮಾಜದಲ್ಲಿ ಕೋಮು ಗಲಭೆಗೆ ಕಾರಣವಾಗುವಂತಹ ಸುಳ್ಳು ಮತ್ತು ಆತಂಕಕಾರಿ ಸಂದೇಶ ಹಂಚಿದ ಇಬ್ಬರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ 15-10-2025 ರಂದು ಓರ್ವ ವ್ಯಕ್ತಿ ವಾಯ್ಸ್ ಮೆಸೇಜ್ ಮೂಲಕ “ಒಂದು ಗ್ಯಾಂಗ್ ಇದೆ, ಯಾರೂ careless ಮಾಡಬೇಡಿ… ಕಿನ್ನಿಗೋಳಿ, ಭಟ್ಟಕೋಡಿ ಬಾರ್‌ನಲ್ಲಿ ಕುಡುಕರ ಗ್ಯಾಂಗ್ ಇದೆ, ಜನರು ಎಚ್ಚರಿಕೆಯಿಂದ ಇರಬೇಕು” ಎಂಬಂತ ಸಂದೇಶವನ್ನು ಪ್ರಸಾರ ಮಾಡಿದ್ದಾನೆ.

ಈ ಸಂದೇಶವು ಸಾಮಾಜಿಕ ಅಶಾಂತಿ ಮತ್ತು ಆತಂಕ ಉಂಟುಮಾಡುವ ಉದ್ದೇಶದಿಂದ ಶೇರ್ ಮಾಡಲ್ಪಟ್ಟಿದ್ದು, ಸಾರ್ವಜನಿಕರಲ್ಲಿ ಗೊಂದಲ ಹಾಗೂ ಕೋಮು ಭಾವನೆಗಳನ್ನು ಪ್ರಚೋದಿಸುವಂತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ.108/2025, ಕಲಂ 353(2) ಬಿಎನ್ಎಸ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತರು:1️⃣ ಮೊಹಮ್ಮದ್ ಅನ್ವರ್ (44), ತಂದೆ ಟಿ.ಎ. ಮೊಯಿದ್ದಿನ್, ನಿವಾಸಿ – ಮೆಹನಾಜ್ ಮಂಜಿಲ್, ಶಾಂತಿನಗರ, ಗುತ್ತಕಾಡು, ತಾಳಿಪಾಡಿ ಗ್ರಾಮ.
2️⃣ ತಾಯಿರ್ ನಕಾಶ್ (42), ತಂದೆ ಟಿ.ಎ. ಮೊಯಿದ್ದಿನ್, ನಿವಾಸಿ – ಮೆಹನಾಜ್ ಮಂಜಿಲ್, ಶಾಂತಿನಗರ, ಗುತ್ತಕಾಡು, ತಾಳಿಪಾಡಿ ಗ್ರಾಮ.

ಪೊಲೀಸರು ಇಬ್ಬರನ್ನೂ ದಸ್ತಗಿರಿ ಮಾಡಿಕೊಂಡು ನ್ಯಾಯಾಂಗ ಕ್ರಮ ಕೈಗೊಂಡಿದ್ದಾರೆ.

ಮಂಗಳೂರು ನಗರ ಪೊಲೀಸ್ ಘಟಕವು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು — “ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಸುಳ್ಳು, ಆತಂಕಕಾರಿ ಅಥವಾ ಕೋಮು ಪ್ರಚೋದಕ ಸಂದೇಶಗಳಿಗೆ ಗಮನ ಕೊಡಬಾರದು. ಇಂತಹ ಸಂದೇಶಗಳನ್ನು ಫಾರ್ವರ್ಡ್ ಮಾಡುವುದರಿಂದ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.”

ಪೊಲೀಸರು ಇಂತಹ ಸಂದೇಶಗಳನ್ನು ತಕ್ಷಣವೇ ಸಂಬಂಧಿತ ಠಾಣೆಗೆ ಕಳುಹಿಸಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments