ಸಂಸದ ನಳಿನ್ ರನ್ನು ಸನ್ಮಾನಿಸಿದ ಶಾಸಕ ಕಾಮತ್

Spread the love

ಸಂಸದ ನಳಿನ್ ರನ್ನು ಸನ್ಮಾನಿಸಿದ ಶಾಸಕ ಕಾಮತ್

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭೂತಪೂರ್ವ ವಿಜಯವನ್ನು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಶಾಸಕ ಡಿ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಆಚರಿಸಲಾಯಿತು.

ವಿಜಯಿ ಅಭ್ಯರ್ಥಿ ಹಾಗೂ ಸಂಸದರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರನ್ನು ಸನ್ಮಾನಿಸಿ ಅಭಿನಂದನಾ ಮಾತುಗಳನ್ನು ಆಡಿದ ಶಾಸಕ ಕಾಮತ್ ಅವರು ರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಸೂಕ್ತ ಆಯ್ಕೆ ಎಂದು ಜನ ಮತ್ತೊಮ್ಮೆ ತೀರ್ಮಾನಿಸಿದ್ದಾರೆ. ಮೋದಿಯವರ ಸುವರ್ಣಯುಗ ಮುಂದುವರೆಯುವ ಅಪೇಕ್ಷೆಯನ್ನು ಜನ ಬಿಜೆಪಿಗೆ ಮತ ನೀಡುವ ಮೂಲಕ ವ್ಯಕ್ತಪಡಿಸಿದ್ದಾರೆ. ಮೋದಿಯವರು ಪ್ರಧಾನಿಯಾಗಿ ಮತ್ತು ಭ್ರಷ್ಟಾಚಾರ ರಹಿತ, ನಿಷ್ಕಂಲಕ ವ್ಯಕ್ತಿತ್ವದ, ಪ್ರಾಮಾಣಿಕ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಹ್ಯಾಟ್ರಿಕ್ ಗೆಲ್ಲಿಸಿ ದಕ್ಷಿಣ ಕನ್ನಡದ ಮುಂದಿನ ಐದು ವರ್ಷ ಹೊಸ ಅಭಿವೃದ್ಧಿಗೆ ಕಾರಣವಾಗಲಿದೆ ಎಂದು ಶಾಸಕ ಕಾಮತ್ ಹೇಳಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಜನರು ಮೂರನೇ ಬಾರಿ ಮಾಡಿರುವ ಆರ್ಶೀವಾದವನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸುತ್ತೇನೆ. ಶಕ್ತಿಮೀರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮೋದಿಯವರ ನಾಯಕತ್ವ, ಕೇಂದ್ರ ನಾಯಕರ ಸಲಹೆ, ಮಾರ್ಗದರ್ಶನದಿಂದ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಶ್ರಮ ಹಾಕಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಸಂಜೀವ್ ಮಠಂದೂರು, ಡಾ|ಭರತ್ ಶೆಟ್ಟಿ, ಮಾಜಿ ಶಾಸಕ ಯೋಗೀಶ್ ಭಟ್, ಬಿಜೆಪಿ ಮುಖಂಡರಾದ ಗೋಪಾಲಕೃಷ್ಣ ಹೇರಳೆ, ಬ್ರಿಜೇಶ್ ಚೌಟ, ರವಿಶಂಕರ್ ಮಿಜಾರ್, ಪ್ರೇಮಾನಂದ ಶೆಟ್ಟಿ, ವಸಂತ ಜೆ ಪೂಜಾರಿ, ಸುಧಾಕರ ಜೋಷಿ, ಜಗದೀಶ್ ಶೆಟ್ಟಿ, ರಮೇಶ್ ಕಂಡೆಟ್ಟು, ಭಾಸ್ಕರಚಂದ್ರ ಶೆಟ್ಟಿ, ಶ್ರೀನಿವಾಸ ಶೇಟ್, ಪ್ರಭಾಮಾಲಿನಿ, ರಾಜೇಂದ್ರ, ಪೂರ್ಣಿಮಾ, ಪೂರ್ಣಿಮಾ ರಾವ್, ಚರಿತ ಪೂಜಾರಿ, ಹರಿಣಿ, ಕಾತ್ಯಾಯಿನಿ ಸಹಿತ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love