ಸಾರಿಗೆ ಸಚಿವರಿಗೆ ಬಜಾಲ್-ನಂತೂರು-ಕಲ್ಲಕಟ್ಟೆಗೆ ಬಸ್ಸು ಮನವಿ

Spread the love

ಸಾರಿಗೆ ಸಚಿವರಿಗೆ ಬಜಾಲ್-ನಂತೂರು-ಕಲ್ಲಕಟ್ಟೆಗೆ ಬಸ್ಸು ಮನವಿ

ಬಜಾಲ್ ಫೈಸಲ್ ನಗರದಿಂದ ಬಜಾಲ್ ಫೈಸಲ್ ಕಲ್ಲಕಟ್ಟೆ ಬಸ್ಸ್ ನಿಲ್ದಾಣದವರೆಗೆ ಕೆಎಸ್ಸಾರ್ಟಿಸಿ ಬಸ್ಸು ಪ್ರಯಾಣ ಮುಂದುವರಿಸಲು ಎಲ್ಲಾ ಅಧಿಕಾರಿಗಳಿಗೆ ಜೆಡಿಎಸ್ ದಕ್ಷಿಣ ಕನ್ನಡ ವಿಧಾನ ಸಭಾ ಕ್ಷೇತ್ರದಿಂದ ಮನವಿಯನ್ನು ಸಲ್ಲಿಸಲಾಗಿದೆ.

ಈ ಬಗ್ಗೆ ಕೂಡಲೇ ಕ್ರಮ ಕೈ ಗೊಳ್ಳುವಂತೆ ಸಾರಿಗೆ ಸಚಿವರಾದ ಡಿ.ಸಿ ತಮ್ಮಣ್ಣನವರಿಗೆ ಜೆಡಿಎಸ್ ನಿಯೋಗ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ ಮುಂದಾಳತ್ವದಲ್ಲಿ ಮನವಿಯನ್ನು ನೀಡಲಾಯಿತು. ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು ಕೂಡಲೇ ಕ್ರಮ ಕೈಗೊಳ್ಳುವಂತೆ ಕೆಎಸ್ಸಾರ್ಟಿಸಿ ವಿಭಾಗ ಅಧಿಕಾರಿಗಳಿಗೆ ಆದೇಶವನ್ನು ನೀಡಿದರು.

ನಿಯೋಗದಲ್ಲಿ ಯುವ ಜನತಾ ದಳದ ನಾಯಕರಾದ ಅಕ್ಷಿತ್ ಸುವರ್ಣ, ಶ್ರೀನಾಥ್ ರೈ, ರತ್ನಾಕರ ಸುವರ್ಣ, ಮಧುಸೂಧನ್ ಗೌಡ, ವಕೀಲರಾದ ರಘುನಾಥ್, ರಜಾಕ್, ಅಸಿಫ್, ಬಜಾಲ್ ವಾರ್ಡಿನ ನಾಯಕರಾದ ಇಝಾ, ಬಜಾಲ್ ಆರಿಫ್, ಯಾಕೋಬ್ ಮುಂತಾದವರು ಉಪಸ್ಥಿತರಿದ್ದರು.


Spread the love