ಸೋಮವಾರವೂ ದ.ಕ. ಜಿಲ್ಲೆ ಸಂಪೂರ್ಣ ಬಂದ್

Spread the love

ಸೋಮವಾರವೂ ದ.ಕ. ಜಿಲ್ಲೆ ಸಂಪೂರ್ಣ ಬಂದ್

ಮಂಗಳೂರು : ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆ ಸೋಮವಾರವೂ ಸಂಪೂರ್ಣ ಬಂದ್ ಆಗಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.

ರವಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ತಿಳಿಸಿದರು.

ಸೋಮವಾರವೂ ಬಂದ್ ಮುಂದುವರಿಯಲಿದ್ದು, ಮಂಗಳವಾರ ಬೆಳಗ್ಗೆ 6ರಿಂದ ಅಪರಾಹ್ನ‌ 3ರವರೆಗೆ ದಿನಸಿ‌ ಅಂಗಡಿ ತೆರೆಯಲು ಅವಕಾಶ ನೀಡಲಾಗುವುದು. ಕುಟುಂಬದ ಒಬ್ಬ ಸದಸ್ಯ ಸಾಮಗ್ರಿ ಖರೀದಿಗೆ ಹೊರಗೆ ಬರಬೇಕು. ದಿನಸಿ ಅಂಗಡಿಯವರು ಅಧಿಕ ದರ ವಸೂಲಿ‌ ಮಾಡಿದರೆ ಪರವಾನಗಿ‌ ರದ್ದುಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.


Spread the love