Spread the love
ಹೊನ್ನಕಟ್ಟೆ – ಕಾನಾ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿಷೇಧ
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಹೊನ್ನಕಟ್ಟೆ -ಕಾನಾ ರಸ್ತೆಯ ರೈಲ್ವೆ ಮೇಲ್ಸೇತುವೆಯಲ್ಲಿ ಕಾಂಕ್ರೀಟೀಕರಣ ಕೈಗೆತ್ತಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಸೇತುವೆಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 16 ರವರೆಗೆ ಒಟ್ಟು 30 ದಿನಗಳ ಕಾಲ ಸಂಪೂರ್ಣ ಸಂಚಾರ ನಿಷೇಧಿಸಲಾಗಿದೆ.
ಈ ಅವಧಿಯಲ್ಲಿ ವಾಹನಗಳು
1.ಮಂಗಳೂರಿನಿಂದ ಕುಳಾಯಿ ಹೊನ್ನಕಟ್ಟೆ ಮೂಲಕ ಎಂ.ಆರ್.ಪಿ.ಎಲ್ ಕಡೆಗೆ ಸಂಚರಿಸುವ ವಾಹನಗಳು ಹೊಸಬೆಟ್ಟು- ಸುರತ್ಕಲ್ ಜಂಕ್ಷನ್ ಮುಖಾಂತರವಾಗಿ ಎಂ.ಆರ್.ಪಿ.ಎಲ್ ಕಡೆಗೆ ಸಂಚರಿಸಬೇಕು.
- ಎಂ.ಆರ್.ಪಿ.ಎಲ್ನಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಎಂ.ಆರ್.ಪಿ.ಎಲ್ – ಸುರತ್ಕಲ್ ಜಂಕ್ಷನ್ಗೆ ಬಂದು ಎನ್.ಹೆಚ್- 66 ಸರ್ವಿಸ್ ರಸ್ತೆಯಲ್ಲಿ ಗೋವಿಂದಾಸ್ ಮುಖಾಂತರ ಮಂಗಳೂರು ಕಡೆಗೆ ಸಂಚರಿಸಬೇಕು.
- ಸುರತ್ಕಲ್-ಗೋವಿಂದದಾಸ್ ಸರ್ವಿಸ್ ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಿದೆ.
- ಸುರತ್ಕಲ್-ಗೋವಿಂದದಾಸ್ ಸರ್ವಿಸ್ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ಗೋವಿಂದದಾಸ್ ಕಡೆಯಿಂದ ಸುರತ್ಕಲ್ ಕಡೆ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರಗಳ ನಿಷೇಧಿಸಿದೆ.
- ಸಂಚಾರ ದಟ್ಟನೆ ಸಮಯದಲ್ಲಿ ಎಂ.ಆರ್.ಪಿ.ಎಲ್, ಹೆಚ್.ಪಿ.ಎಸ್.ಎಲ್, ಬಿ.ಎ.ಎಸ್.ಎಫ್ ಹಾಗೂ ಇತರ ಕಂಪನಿಗಳ ವಾಹನಗಳು ಸುರತ್ಕಲ್-ಗೋವಿಂದದಾಸ್ ಸರ್ವಿಸ್ ರಸ್ತೆಯಲ್ಲಿ ಬಾರದಂತೆ ನಿಷೇಧಿಸಿದೆ. (ಬೆಳಿಗ್ಗೆ 8 ರಿಂದ 9 ಗಂಟೆ, ಸಂಜೆ 4 ರಿಂದ 6 ಗಂಟೆ)
ವಾಹನ ಸವಾರರು ಮತ್ತು ಸಾರ್ವಜನಿಕರು ಈ ಬದಲಾವಣೆಗಳನ್ನು ಗಮನಿಸಿ ಸಹಕರಿಸಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಮಹಾನಗರಪಾಲಿಕೆ ಆಯುಕ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Spread the love