ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್ ಕೆ., ಎಸಿಪಿ ನಜ್ಮಾ ಫಾರೂಕಿಗೆ ಸಿಎಂ ಪದಕ

Spread the love

ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್ ಕೆ., ಎಸಿಪಿ ನಜ್ಮಾ ಫಾರೂಕಿಗೆ ಸಿಎಂ ಪದಕ

ಮಂಗಳೂರು: ದಕ್ಷಿಣ ಕನ್ನಡ ಎಸ್ಪಿ ಡಾ.ಅರುಣ್ ಕೆ., ಮಂಗಳೂರು ನಗರ ಸಂಚಾರ ಉಪ ವಿಭಾಗದ ಎಸಿಪಿ ನಜ್ಮಾ ಫಾರೂಕಿ ಸಹಿತ ಹಲವು ಪೊಲೀಸ್ ಅಧಿಕಾರಿಗಳಿಗೆ 2025ನೇ ಸಾಲಿನ ಸಿಎಂ ಪದಕ ಪ್ರಕಟಗೊಂಡಿದ್ದು, ಎ.2ರಂದು ಬೆಂಗಳೂರಿನಲ್ಲಿ ಸಿಎಂ ಪದಕ ಪ್ರದಾನ ಮಾಡಲಾಗುವುದು.

ಕೆಎಸ್‌ಆರ್‌ಪಿ 7ನೇ ಪಡೆ ಎಆರ್‌ಎಸ್‌ಐ ಕೆ.ಎಂ.ಶಿವಶೇಖರ, ಡಿಎಆರ್ ಎಎಸ್‌ಐ ತಿಲಕ್‌ರಾಜ್, ಬಂಟ್ವಾಳ ಪೊಲೀಸ್ ಠಾಣೆ ಹೆಡ್‌ಕಾನ್‌ಸ್ಟೇಬಲ್ ಇರ್ಷಾದ್ ಪಿ., ಕಂಕನಾಡಿ ನಗರ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಜಯಾನಂದ ಎನ್., ಮಂಗಳೂರು ನಗರ ಸೈಬರ್ ಕ್ರೈಂ ಠಾಣೆಯ ಹೆಡ್‌ಕಾನ್‌ಸ್ಟೇಬಲ್‌ಗಳಾದ ಮಣಿ ಎಂ.ಎನ್. ಮತ್ತು ಸತೀಶ್ (ಪ್ರಸ್ತುತ ಪದೋನ್ನತಿಗೊಂಡು ಬಜಪೆ ಠಾಣೆಯಲ್ಲಿದ್ದಾರೆ). ಬೆಳ್ತಂಗಡಿ ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ವಿಜಯ ಕುಮಾರ್ ರೈ, ಉರ್ವ ಪೊಲೀಸ್ ಠಾಣೆಯ ಮಹಿಳಾ ಹೆಡ್‌ಕಾನ್‌ಸ್ಟೇಬಲ್ ಲಲಿತಾ ಲಕ್ಷ್ಮೀ ಅವರು ಆಯ್ಕೆಯಾಗಿದ್ದಾರೆ.


Spread the love