26.5 C
Mangalore
Wednesday, December 24, 2025

ವಿದ್ಯಾರ್ಥಿಸ್ನೇಹಿ ಪೋಲಿಸ್ ಆಗುವತ್ತ ಒಂದು ಹೆಜ್ಜೆ; ಶಾಲೆಗಳಲ್ಲಿ ಕಾನೂನು ಪಾಠ ಮಾಡಿದ ಅಧಿಕಾರಿಗಳು

ವಿದ್ಯಾರ್ಥಿಸ್ನೇಹಿ ಪೋಲಿಸ್ ಆಗುವತ್ತ ಒಂದು ಹೆಜ್ಜೆ; ಶಾಲೆಗಳಲ್ಲಿ ಕಾನೂನು ಪಾಠ ಮಾಡಿದ ಅಧಿಕಾರಿಗಳು   ಉಡುಪಿ: ಪೋಲಿಸ್ ವ್ಯವಸ್ಥೆಯನ್ನು ಜನಸ್ನೇಹಿ ಹಾಗೂ ವಿದ್ಯಾರ್ಥಿಸ್ನೇಹಿಯಾಗುವತ್ತ ಹಿಂದಿನ ಪೋಲಿಸ್ ವರಿಷ್ಠಾಧಿಕಾರಿಯಾಗಿದ್ದ ಕೆ. ಅಣ್ಣಾಮಲೈ ಅವರು ಶಾಲೆಗಳಲ್ಲಿ ವಿದ್ಯಾರ್ಥಿಗಳೊಂದಿಗೆ...

ಮೆಡಿಕಲ್ ಸೀಟ್ ಕೊಡಿಸುವುದಾಗಿ ಮೋಸ ಮಾಡಿದ 10 ಮಂದಿಯ ಬಂಧನ

ಮೆಡಿಕಲ್ ಸೀಟ್ ಕೊಡಿಸುವುದಾಗಿ ಮೋಸ ಮಾಡಿದ 10 ಮಂದಿಯ ಬಂಧನ ಮಂಗಳೂರು: ವಿದ್ಯಾರ್ಥೀಗಳಿಗೆ ಎಜೆ ಆಸ್ಪತ್ರೆಯಲ್ಲಿ ಎಂ.ಬಿ.ಬಿ.ಎಸ್. ಸೀಟು ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಮೋಸ ಮಾಡಿದ ಬೃಹತ್ ಜಾಲದ ಹತ್ತು ಮಂದಿಯನ್ನು ಕದ್ರಿ...

ಸೆ. 11: ಹೆಜಮಾಡಿಯಿಂದ ಕಾಪುವರೆಗೆ ಬಿಜೆಪಿ ಪಾದಯಾತ್ರೆ

ಸೆ. 11: ಹೆಜಮಾಡಿಯಿಂದ ಕಾಪುವರೆಗೆ ಬಿಜೆಪಿ ಪಾದಯಾತ್ರೆ ಉಡುಪಿ: ರಾಜ್ಯ ಸರಕಾರ 94ಸಿ ಹಾಗೂ 94ಸಿಸಿ ಅಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ...

ಅಪಘಾತ ಪರಿಹಾರ ಮೊತ್ತ ಕಾನೂನು ಹೋರಾಟದಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಗೆ ಗೆಲುವು

ಅಪಘಾತ ಪರಿಹಾರ ಮೊತ್ತ ಕಾನೂನು ಹೋರಾಟದಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಗೆ ಗೆಲುವು ಮಸ್ಕತ್:ಒಮನ್ ರಾಜಧಾನಿ ಮಸ್ಕತ್ ಗೆ ಸಮೀಪದ ಸೂರ್ ಜಾಲಾನ್ ಎಂಬಲ್ಲಿಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಂಟ್ವಾಳದ ಮುಸ್ತಫಾ ಎಂಬ ಯುವಕನ ಕುಟುಂಬಕ್ಕೆ ಪರಿಹಾರಮೊತ್ತ ಬಿಡುಗಡೆಗೊಳಿಸುವಲ್ಲಿ ಕೊನೆಗೂ ಇಂಡಿಯನ್ ಸೋಶಿಯಲ್ ಫೋರಮ್ ಮಸ್ಕತ್ ಕರ್ನಾಟಕ ಚಾಪ್ಟರ್ ಯಶಸ್ವಿಯಾಗಿದೆ. ನಿರಂತರ ಎರಡು ವರ್ಷಗಳ ಕಾಲ ಇಂಡಿಯನ್ ಸೋಶಿಯಲ್ ಫೋರಮ್ನಡೆಸಿದ ಕಾನೂನು ಹೋರಾಟದ ಫಲವಾಗಿ ಅನಾಥವಾಗಿದ್ದ ಕುಟುಂಬಕ್ಕೆ ಪರಿಹಾರ ಮೊತ್ತವಾಗಿ25,16,866 ರೂಪಾಯಿಗಳ ಚೆಕ್ ಹಸ್ತಾಂತರವಾಗಿದೆ. 2017ರ ಆಗಸ್ಟ್ 31ರಂದು ಪರಿಹಾರ ಮೊತ್ತದಚೆಕ್ ಕೈ ಸೇರಿರುವುದಾಗಿ ಮೃತ ಮುಸ್ತಫಾರವರ ತಾಯಿ ಬೀಫಾತಿಮಾ ಅವರು ಇಂಡಿಯನ್ ಸೋಶಿಯಲ್ಫೋರಮ್ ನಿಯೋಗಕ್ಕೆ ಖಾತರಿಪಡಿಸಿದ್ದಾರೆ. ಮೃತ ಮುಹಮ್ಮದ್ ಮುಸ್ತಾಫ ಮೂವರು ಸಹೋದರಿ ಮತ್ತು ಅಸ್ವಸ್ಥೆ ತಾಯಿಯನ್ನು ಹೊಂದಿದ್ದರು. ತೀರಾಬಡ ಕುಟುಂಬದ ಏಕೈಕ ಆಸರೆಯಾಗಿದ್ದ ಮುಸ್ತಫಾ ಉದ್ಯೋಗಕ್ಕಾಗಿ ಒಮನ್ ನ ಮಸ್ಕತ್ ಗೆ ಬಂದಿದ್ದರು. 2015ರಲ್ಲಿ ಅವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಸರಕಾರಿರಜೆ ಇದ್ದರೂ ಇಂಡಿಯನ್ ಸೋಶಿಯಲ್ ಫೋರಮ್ ನ ಕ್ಷಿಪ್ರ ಕಾರ್ಯಾಚರ್ಣೆಯಿಂದಾಗಿ ಎರಡುದಿನಗಳೊಳಗಾಗಿ ಮೃತದೇಹವು ತವರೂರಾದ ಪರ್ಲಿಯಾಕ್ಕೆ ತಲುಪಿತ್ತು. ಮೃತರ ಪರಿಹಾರ ಮೊತ್ತಕ್ಕಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಇಂಡಿಯನ್ ಸೋಶಿಯಲ್ ಫೋರಮ್ನಿರಂತರವಾಗಿ ಅಧಿಕಾರಿಗಳನ್ನು, ರಾಯಭಾರಿ ಕಚೇರಿಯನ್ನು ಹಾಗೂ ವಿಮಾ ಕಂಪೆನಿಯ ವಕೀಲರನ್ನು  ಸಂಪರ್ಕಿಸಿ ಕಾನೂನು ಹೋರಾಟವನ್ನು ನಡೆಸಿತ್ತು. ಅದೇ ರೀತಿ ಊರಿನಿಂದಲೂ ಅದಕ್ಕೆ ಬೇಕಾದದಾಖಲೆಗಳನ್ನೂ ತರಿಸಿಕೊಂಡು ಪರಿಹಾರ ಮೊತ್ತ ಪಡೆಯುವಲ್ಲಿ ಸಾಕಷ್ಟು ಪರಿಶ್ರಮ ವಹಿಸಿತ್ತು. ಇದೀಗಇಂಡಿಯನ್ ಸೋಶಿಯಲ್ ಫೋರಮ್ ನ ನಿರಂತರ ಪರಿಶ್ರಮಕ್ಕೆ ಜಯ ಸಿಕ್ಕಿದೆ. ಇಂಡಿಯನ್ ಸೋಶಿಯಲ್ ಫೋರಮ್ ನ ಕಾನೂನು ಹೋರಾಟದ ನಿಯೋಗದಲ್ಲಿ ನಝೀರ್ ಕೋಡಿಂಬಾಡಿ, ಅನ್ವರ್ ಮೂಡಬಿದ್ರೆ ಹಾಗೂ ಸಲಾಮ್ ತುಂಬೆ ಸಹಕರಿಸಿದ್ದರು.

ಕುಂದಾಪುರ ತಾಲೂಕು ಪತ್ರಕರ್ತರಿಂದ ಗೌರಿ ಲಂಕೇಶ್ ಅವರಿಗೆ ನುಡಿನಮನ

ಕುಂದಾಪುರ ತಾಲೂಕು ಪತ್ರಕರ್ತರಿಂದ ಗೌರಿ ಲಂಕೇಶ್ ಅವರಿಗೆ ನುಡಿನಮನ ಕುಂದಾಪುರ: ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸಮುದಾಯ ಕುಂದಾಪುರ ಇವರ ನೇತೃತ್ವದಲ್ಲಿ ಶುಕ್ರವಾರ ಸಂಜೆ ತಾಲೂಕು ಪಂಚಾಯತ್ ಮುಂಭಾಗದಲ್ಲಿ ನಡೆದ ಪತ್ರಕರ್ತೆ,...

ನಕ್ಸಲರು ಗೌರಿ ಲಂಕೇಶ್‌ ಹತ್ಯೆ ಮಾಡಿರುವ ಸಾಧ್ಯತೆ ಇಲ್ಲ : ಎಸ್ಪಿ ಅಣ್ಣಾಮಲೈ

ನಕ್ಸಲರು ಗೌರಿ ಲಂಕೇಶ್‌ ಹತ್ಯೆ ಮಾಡಿರುವ ಸಾಧ್ಯತೆ ಇಲ್ಲ : ಎಸ್ಪಿ ಅಣ್ಣಾಮಲೈ ಚಿಕ್ಕಮಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆಗೂ ನಕ್ಸಲ್‌ಗೂ ಮೇಲ್ನೋಟಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಚಿಕ್ಕಮಗಳೂರಿನಲ್ಲಿ ಎಸ್ಪಿ ಅಣ್ಣಾಮಲೈ...

ಧರ್ಮಸಂಸತ್ ಅಧಿವೇಶನ ಕಾರ್ಯಾಲಯ ಕಚೇರಿ ಉದ್ಘಾಟನೆ

ಧರ್ಮಸಂಸತ್ ಅಧಿವೇಶನ ಕಾರ್ಯಾಲಯ ಕಚೇರಿ ಉದ್ಘಾಟನೆ ಉಡುಪಿ: ಭಾರತ ತ್ಯಾಗ ಭೂಮಿ. ಇಲ್ಲಿ ರಾಜಪೀಠಕ್ಕಿಂತ ಗುರು ಪೀಠ ಶ್ರೇಷ್ಠ. ಆದರೆ  ಇತ್ತೀಚಿನ ವರ್ಷಗಳಲ್ಲಿ ಹಿಂದೂ ಸಮಾಜದ ಮೇಲೆ ವೈಚಾರಿಕ, ಸಾಂಸ್ಕøತಿಕ, ಅಧಿಕಾರದ ತ್ರಿವಳಿ ದಾಳಿಗಳು...

ಮುಂದಿನ ವಾರದಿಂದ ಶಾಲಾ ಮಕ್ಕಳಿಗೆ ಬ್ಲೂವೇಲ್ ಗೇಮ್ ಕುರಿತು ಮಾಹಿತಿ; ಎಸ್ಪಿ ಸಂಜೀವ್ ಪಾಟೀಲ್

ಮುಂದಿನ ವಾರದಿಂದ ಶಾಲಾ ಮಕ್ಕಳಿಗೆ ಬ್ಲೂವೇಲ್ ಗೇಮ್ ಕುರಿತು ಮಾಹಿತಿ; ಎಸ್ಪಿ ಸಂಜೀವ್ ಪಾಟೀಲ್ ಚಿತ್ರಗಳು : ಪ್ರಸನ್ನ ಕೊಡವೂರು ಉಡುಪಿ: ಜಗತ್ತಿನ ಪೋಷಕರ ನಿದ್ದೆಗೆಡಿಸಿ ಬ್ಲೂವೇಲ್ ಗೇಮ್ ಕುರಿತು ಜಿಲ್ಲೆಯ ಎಲ್ಲಾ ಶಾಲೆಯ ಮಕ್ಕಳಲ್ಲಿ...

ಗರ್ಭಿಣಿಯರಿಗೆ ಅಂಗನವಾಡಿಗಳಲ್ಲೇ ಬಿಸಿಯೂಟ

ಗರ್ಭಿಣಿಯರಿಗೆ ಅಂಗನವಾಡಿಗಳಲ್ಲೇ ಬಿಸಿಯೂಟ, ಅ.2 ರಿಂದ 'ಮಾತೃಪೂರ್ಣ' ಯೋಜನೆ ಜಾರಿ ಮಂಗಳೂರು: ಅಂಗನವಾಡಿಗಳಲ್ಲಿ ಶಿಶುಗಳ, ಪುಟ್ಟ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಸರಕಾರದ ಯೋಜನೆಯಲ್ಲಿ ಇನ್ನೊಂದು ಮಹತ್ವದ ಸೇರ್ಪಡೆಯಾಗಿ ‘ಮಾತೃಪೂರ್ಣ’ ಯೋಜನೆ ಅಕ್ಟೋಬರ್ 2...

ಉಡುಪಿ ಸರ್ವಿಸ್ ಬಸ್ಸು ನಿಲ್ದಾಣ, ಕ್ಲಾಕ್ ಟವರ್ ಹಾಗೂ ಜಟಕಾ ನಿಲ್ದಾಣದ ಬಳಿ ಪ್ರತಿಭಟನೆ ನಿಷೇಧ

ಉಡುಪಿ ಸರ್ವಿಸ್ ಬಸ್ಸು ನಿಲ್ದಾಣ, ಕ್ಲಾಕ್ ಟವರ್ ಹಾಗೂ ಜಟಕಾ ನಿಲ್ದಾಣದ ಬಳಿ ಪ್ರತಿಭಟನೆ ನಿಷೇಧ ಉಡುಪಿ:ಸಾರ್ವಜನಿಕ ಹಿತದೃಷ್ಟಿ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಉಡುಪಿ ಸರ್ವಿಸ್ ಬಸ್ಸು ನಿಲ್ದಾಣ, ಕ್ಲಾಕ್ ಟವರ್ ಹಾಗೂ...

Members Login

Obituary

Congratulations