ಐದು ಹೊಸ ಪ್ರಕರಣಗಳೊಂದಿಗೆ ಉಡುಪಿಯಲ್ಲಿ ಒಂದೇ ದಿನ 23 ಮಂದಿಗೆ ಕೊರೋನಾ ಪಾಸಿಟಿವ್ ದೃಢ
ಐದು ಹೊಸ ಪ್ರಕರಣಗಳೊಂದಿಗೆ ಉಡುಪಿಯಲ್ಲಿ ಒಂದೇ ದಿನ 23 ಮಂದಿಗೆ ಕೊರೋನಾ ಪಾಸಿಟಿವ್ ದೃಢ
ಉಡುಪಿ : ಜಿಲ್ಲೆಯಲ್ಲಿ ಕೋರೊನಾ ಅಬ್ಬರ ಮುಂದುವರೆದಿದ್ದು ಭಾನುವಾರ ಸಂಜೆಯ ವೇಳೆ ಮತ್ತೆ ಐದು ಹೊಸ ಪಾಸಿಟಿವ್ ಪ್ರಕರಣಗಳು...
ದಲಿತರನ್ನು ರಕ್ಷಿಸಲು ಯೋಗ್ಯತೆ ಇಲ್ಲದಿದ್ದರೆ ಖುರ್ಚಿ ಖಾಲಿ ಮಾಡಿ: ಜಿಲ್ಲಾಡಳಿತದ ವಿರುದ್ದ ಉದಯ್ ಕುಮಾರ್ ತಲ್ಲೂರು ಆಕ್ರೋಶ
ದಲಿತರನ್ನು ರಕ್ಷಿಸಲು ಯೋಗ್ಯತೆ ಇಲ್ಲದಿದ್ದರೆ ಖುರ್ಚಿ ಖಾಲಿ ಮಾಡಿ: ಜಿಲ್ಲಾಡಳಿತದ ವಿರುದ್ದ ಉದಯ್ ಕುಮಾರ್ ತಲ್ಲೂರು ಆಕ್ರೋಶ
ಕುಂದಾಪುರ: ಉಪ್ಪಿನಕುದ್ರು ಪ್ರೌಢ ಶಾಲೆಯಲ್ಲಿ ದಲಿತ ಮುಖ್ಯಶಿಕ್ಷಕಿಗೆ ಶಾಲೆಗೆ ಬಾರದಂತೆ ಬಹಿಷ್ಕಾರ ಹಾಕಿ ಅವರ ಮೇಲೆ...
ರೌಡಿ ಶೀಟರ್, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ: 8 ಆರೋಪಿಗಳ ಬಂಧನ – ಗೃಹ ಸಚಿವ ಪರಮೇಶ್ವರ್
ರೌಡಿ ಶೀಟರ್, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ: 8 ಆರೋಪಿಗಳ ಬಂಧನ – ಗೃಹ ಸಚಿವ ಪರಮೇಶ್ವರ್
ಮಂಗಳೂರು: ಬಜ್ಪೆ ಸಮೀಪದ ಕಿನ್ನಿ ಪದವು ಸಮೀಪ ದುಷ್ಕರ್ಮಿಗಳಿಂದ ಕೊಲೆಯಾದ ರೌಡಿ ಶೀಟರ್...
ಮಂಗಳೂರು: ಅಧಿಕೃತ ದಾಖಲೆ ಇಲ್ಲದೆ ಅಕ್ರಮ ಮರ ಸಾಗಟ ಮಾಡುತ್ತಿದ್ದ ವಾಹನ ಹಾಗೂ ಸೊತ್ತುಗಳ ವಶ
ಮಂಗಳೂರು: ಡಿ: 04 ರಂದು ಮಂಗಳೂರು ತಾಲೂಕು ಬಂಗ್ರಕುಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66, ಕೂಳೂರು ಸೇತುವೆಯ ಅಯ್ಯಪ್ಪ ಗುಡಿ ಎಂಬಲ್ಲಿ ಅಕ್ರಮವಾಗಿ ಅಧಿಕೃತ ದಾಖಲಾತಿಗಳಿಲ್ಲದೆ ವಿವಿಧ ಜಾತಿಯ 49 ದಿಮ್ಮಿ =4.732 ಘ.ಮೀ....
ಅಕ್ರಮ ಮರಳು ಧಂಧೆಕೋರರಿಗೆ ಮುಂದೈತೆ ಮಾರಿ ಹಬ್ಬ! ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಚಿಂತನೆ
ಅಕ್ರಮ ಮರಳು ಧಂಧೆಕೋರರಿಗೆ ಮುಂದೈತೆ ಮಾರಿ ಹಬ್ಬ! ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಚಿಂತನೆ
ಮ್ಯಾಂಗಲೋರಿಯನ್ ಸುದ್ದಿಲೋಕ
ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯನ್ನು ಪರಿಶೀಲಸಲು ತೆರಳಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮತ್ತು ಕುಂದಾಪುರ ಉಪವಿಭಾಗಾಧಿಕಾರಿ ಶೀಲ್ಪಾ ನಾಗ್ ಹಾಗೂ ಇತರರ ಮೇಲೆ ನಡೆದ ಹಲ್ಲೆ ಮತ್ತು ಕೊಲೆಯತ್ನದಿಂದ ಸ್ವಲ್ಪವೂ ಜಿಲ್ಲಾಧಿಕಾರಿಯವರು ವಿಚಲಿತರಾಗಿಲ್ಲ ಎನ್ನುವುದು ಅವರ ದಿಟ್ಟತನ ಹಾಗೂ ಧ್ಯೆರ್ಯದ ಮಾತುಗಳಿಂದ ಎದ್ದು ಕಾಣುತ್ತದೆ.
ಭಾನುವಾರ ಮಧ್ಯರಾತ್ರಿ ಜಿಲ್ಲಾಧಿಕಾರಿ ಹಾಗೂ ಇತರರ ಮೇಲೆ ಹಲ್ಲೆ ಯತ್ನ ನಡೆದು ಅದಕ್ಕೆ ಸಂಬಂಧಿಸಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಹಾಗೂ ಇತರ ಕೆಲಸಗಳನ್ನು ಮುಗಿಸಿ ಎಂದಿನಂತೆ ಸಮಯಕ್ಕೆ ಸರಿಯಾಗಿ ಕಚೇರಿ ಕೆಲಸಕ್ಕೆ ಆಗಮಿಸಿದ ಅವರು ದಿನವಿಡೀ ಬಿಡುವಿಲ್ಲದ ಕೆಲಸಗಳಲ್ಲಿ ಮಗ್ನವಾಗಿ ಏನೂ ಆಗದಂತೆ ಇದ್ದಿರುವುದು ಅವರ ಧ್ಯೇರ್ಯವನ್ನು ಎತ್ತಿ ತೋರಿಸುತ್ತಿತ್ತು.
ಈ ನಡುವೆ ಬೆಳಿಗ್ಗೆ ಅವರನ್ನು ಭೇಟಿ ಮಾಡಲು ಬಂದ ಪತ್ರಕರ್ತರ ಬಳಿ ಹಿಂದಿನ ರಾತ್ರಿ ನಡೆದ ಘಟನೆಯ ಸಂಪೂರ್ಣ ವಿವರ ನೀಡುವುದರೊಂದಿಗೆ ಜಿಲ್ಲೆಯಲ್ಲಿ ನಿರಾತಂಕವಾಗಿ ನಡೆಯುತ್ತಿರುವ ಮರಳು ಮಾಫಿಯಾಯನ್ನು ಮಟ್ಟ ಹಾಕದೇ ಬಿಡುವುದಿಲ್ಲ ಎಂಬ ದಿಟ್ಟ ಮಾತುಗಳನ್ನು ಅವರು ಆಡಿದ್ದಾರೆ. ಅಲ್ಲದೆ ನಿನ್ನೆ ನಡೆದ ಘಟನೆ ನನ್ನ ಮುಂದಿನ ಹೋರಾಟದ ಅಂತ್ಯವಾಗದೇ ಅದು ಆರಂಭವಾಗಲಿದೆ. ಜೀವ ಭಯವಿದ್ದರೂ ಕೂಡ ಹಲವರಿಂದ ಜಿಲ್ಲಾಡಳಿತ ಅಕ್ರಮ ಮರಳುಗಾರಿಕೆ ತಡೆಯಲು ವಿಫವಾಗಿದೆ ಎಂಬ ಮಾಧ್ಯಮ ವರದಿ ಅವರನ್ನು ಸದಾ ಕಾಡುತ್ತಿದ್ದ ಪರಿಣಾಮ ಕೇವಲ ತನ್ನ ಗನ್ ಮ್ಯಾನ್ ಹಾಗೂ ಜಿಪಂನ ಹೊರಗುತ್ತಿಗೆ ಕಾರಿನ ಚಾಲಕನೊಂದಿಗೆ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿ ಶೀಲ್ಪಾ ನಾಗ್ ಅವರ ಪತಿ ಹಾಗೂ ಅವರ ಡ್ರೈವರ್ ಜೊತೆ ಅಕ್ರಮ ಮರಳುಗಾರಿಕೆ ನಡೆಯುವಲ್ಲಿ ಸ್ವತಃ ಯಾರಿಗೂ ಮಾಹಿತಿ ನೀಡದೆ ತೆರಳಿದ್ದರು. ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಅದು ಎಲ್ಲಿ ಸೋರಿಕೆಯಾಗುತ್ತದೆ ಇದರಿಂದ ಆರೋಪಿಗಳು ತಪ್ಪಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ ಎಂದು ಆಲೋಚಿಸಿ ಬಂದ ಜಿಲ್ಲಾಧಿಕಾರಿ ತಂಡಕ್ಕೆ ಕಂಡ್ಲೂರಿನಲ್ಲಿ ನಡೆದ ಘಟನೆ ಒಂದು ರೀತಿಯಲ್ಲಿ ಆಘಾತವನ್ನು ತಂದಿದೆ ಆದರೂ ಕೂಡ ಅದನ್ನು ಸಾವರಿಸಿಕೊಂಡು ವಾಪಾಸ್ ಅಲ್ಲಿಂದ ಹೋಗವಾಗಲೇ ಅವರೊಂದು ಧೃಢ ನಿರ್ದಾರದೊಂದಿಗೆ ಉಡುಪಿ ನಗರ ಠಾಣೆಗೆ ಆಗಮಿಸಿದ್ದರು. ಅವರ ಚಾಲೆಂಜ್ ಪ್ರಕಾರ ಈ ಹೋರಾಟ ಯಾವುದೇ ಅಂತ್ಯವಾಗಲ್ಲ ಬದಲಾಗಿ ಮರಳುಗಾರಿಕೆಯ ವಿರುದ್ದ ಹೋರಾಟ ತೀವೃಗೊಳಿಸಲು ದಾರಿ ಮಾಡಿಕೊಟ್ಟಂತಾಗಿದೆ.
ಮುಂದಿನ ದಿನಗಳಲ್ಲಿ ಜೀವದ ಭಯದಿಂದಾಗಿ ಏಕಾಂಗಿಯಾಗಿ ನಡೆಸುವ ಧಾಳಿಯನ್ನು ಸಂಘಟಿತವಾಗಿ ಮಾಡಲು ನಿರ್ಧರಿಸಿರುವ ಜಿಲ್ಲಾಧಿಕಾರಿಗಳು ಇದಕ್ಕಾಗಿ ವಿಶೇಷ ಸ್ವ್ಯಾಡ್ ಒಂದನ್ನು ಸಿದ್ದಪಡಿಸಿ ಅದರ ಮೂಲಕ ಹೋರಾಟದ ರೂಪುರೇಷೆ ನಡೆಸಲಾಗುವುದು ಅಲ್ಲದೆ ಪೊಲೀಸ್ ಇಲಾಖೆಯ ಜೊತೆಗೆ ಮುಂದಿನ ದಿನಗಳಲ್ಲಿ ಸ್ಪೆಷಲ್ ಸ್ಕ್ವಾಡ್ ರಚನೆ ಮಾಡಲಾಗುವುದು. ಸ್ಕ್ವಾಡ್ ಮೂಲಕ ಜಿಲ್ಲೆಯ ಎಲ್ಲೆಲ್ಲಾ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಅಲ್ಲೆಲ್ಲಾ ದಾಳಿ ನಡೆಸುವ ಚಿಂತನೆ ಅವರು ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ಧಾಳಿ ಮಾಡುವುದರೊಂದಿಗೆ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ಎಳ್ಳು ನೀರು ಬಿಡಬೇಕು ಎಂಬ ಚಿಂತನೆ ಅವರಲ್ಲಿದೆ. ಅವರ ಕನಸಿಗೆ ಅಧಿಕಾರಿ ವರ್ಗ ಸಂಪೂರ್ಣ ಬೆಂಬಲ ನೀಡಲಿದೆ ಎಂಬ ವಿಶ್ವಾಸವನ್ನು ಅರು ಹೊಂದಿದ್ದು ಇದರಿಂದ ಅವರ ಸಾಧನೆಗೆ ಇನ್ನಷ್ಟು ಬಲ ಬರಲಿದೆ.
ಈ ನಡುವೆ ಸರಕಾರದ ಮಂತ್ರಿಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್...
ಮಂಗಳೂರು: ಅಕ್ರಮವಾಗಿ ವ್ಯಕ್ತಿಯೋರ್ವರ ಸ್ಥಳಕ್ಕೆ ಪ್ರವೇಶ ದೂರು ದಾಖಲು
ಮಂಗಳೂರು: ಅಕ್ರಮವಾಗಿ ವ್ಯಕ್ತಿಯೋರ್ವರ ಸ್ಥಳಕ್ಕೆ ಪ್ರವೇಶ ಮಾಡಿ ಆವರಣ ಗೋಡೆಗೆ ಹಾನಿಗೊಳಿಸಿದ ಕುರಿತು ಜಾಗದ ಮ್ಹಾಲಕಿ ಸೆಲೈನ್ ಮಿನೇಜಸ್ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ಮೇ 21 ರಂದುಬೆಳಿಗ್ಗೆ ಹೆನ್ರಿ ಮಿನೇಜೆಸ್, ಆತನ...
ಸಾಮೂಹಿಕ ಪ್ರಾರ್ಥನೆ ಆರೋಪ; ಪಡುಕೋಣೆ ಚರ್ಚ್ ಧರ್ಮಗುರು ಸೇರಿದಂತೆ ಏಳು ಮಂದಿ ಮೇಲೆ ಎಫ್ ಐ ಆರ್
ಸಾಮೂಹಿಕ ಪ್ರಾರ್ಥನೆ ಆರೋಪ; ಪಡುಕೋಣೆ ಚರ್ಚ್ ಧರ್ಮಗುರು ಸೇರಿದಂತೆ ಏಳು ಮಂದಿ ಮೇಲೆ ಎಫ್ ಐ ಆರ್
ಬೈಂದೂರು: ಜಿಲ್ಲಾಧಿಕಾರಿಗಳು ಹೊರಡಿಸಿರುವ ಸೆಕ್ಷನ್ 144(3) ಆದೇಶದ ಹೊರತಾಗಿಯೂ ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ...
ಮೂಡುಬಿದಿರೆ: ಜೈನ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಾನವ ಹಕ್ಕುಗಳ ಬಗೆಗೆ ಅರಿವು ಕಾರ್ಯಕ್ರಮ
ಮೂಡುಬಿದಿರೆ: ಸ್ಥಳೀಯ ಜೈನ ಪ್ರೌಢಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸರ್ದಾರ್ ಪಟೇಲ್ ಗ್ರಾಹಕ ಕ್ಲಬ್ ನ ಆಶ್ರಯದಲ್ಲಿ ಮಾನವ ಹಕ್ಕುಗಳ ಬಗೆಗೆ ಅರಿವು ಕಾರ್ಯಕ್ರಮವನ್ನು ಜನವರಿ 6, 2015 ರಂದು ಆಯೋಜಿಸಲಾಗಿತ್ತು. ಪ್ರಾರಂಭದಲ್ಲಿ ಅರಿವು...
ಬೆಂಗಳೂರು: ಮರ ಬಿದ್ದು ಇನ್ಸ್ಪೆಕ್ಟರ್ ತಂದೆ ಸಾವು
ಬೆಂಗಳೂರು: ಆಡುಗೋಡಿಯ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಸಿಎಆರ್) ವಸತಿ ಸಮುಚ್ಚಯದ ‘ಎಂ’ ಬ್ಲಾಕ್ನಲ್ಲಿ ಬುಧವಾರ ಸಂಜೆ ಬೃಹತ್ ಗುಲ್ಮೊಹರ್ ಮರ ಮೈಮೇಲೆ ಬಿದ್ದು ರಾಜ್ಯ ಗುಪ್ತಚರ ದಳದ ಇನ್ಸ್ಪೆಕ್ಟರ್ ಧರಣೇಶ್...
ಕಲ್ಲಡ್ಕ ಪ್ರಭಾಕರ ಭಟ್ ಕೇವಲ ಆರ್ ಎಸ್ ಎಸ್, ಹಿಂದೂ ನಾಯಕನಲ್ಲ : ಮಿಥುನ್ ರೈ
ಕಲ್ಲಡ್ಕ ಪ್ರಭಾಕರ ಭಟ್ ಕೇವಲ ಆರ್ ಎಸ್ ಎಸ್ ನಾಯಕನ, ಹಿಂದೂ ನಾಯಕನಲ್ಲ : ಮಿಥುನ್ ರೈ
ಮಂಗಳೂರು: ಕಲ್ಲಡ್ಕ ಪ್ರಭಾಕರ ಭಟ್ ಅವರು ಕೇವಲ ಆರ್ ಎಸ್ ಎಸ್ ನಾಯಕರೇ ಹೊರತು ಹಿಂದೂ...


























