Mangaluru: Ayush Habba -2015

Spread the love

ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿ ಡಿಸೆಂಬರ್ 19 ಮತ್ತು 20ರಂದು ನಡೆಯಲಿರುವ ಆಯುಷ್ ಹಬ್ಬ – 2015ರ ಪ್ರಯುಕ್ತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಆರೋಗ್ಯ ಕಾರ್ಡ್ ವಿತರಣೆಯ ಜಾಗೃತಿ ಜಾಥಾ ಹಾಗೂ ಜಾಹೀರಾತು ವಾಹನವನ್ನು ಕರ್ನಾಟಕ ಆಯುರ್ವೆದೀಕ್ ಮೆಡಿಕಲ್ ಕಾಲೇಜಿನ ಟ್ರಸ್ಟಿಯಾದ ಡಾ| ರಜನೀಶ್ ಸೊರಕೆಯವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರು ವಿಶೇಷಾಧಿಕಾರಿಯಾದ ಡಾ| ಇಕ್ಬಾಲ್, ಆಯುಷ್ ಹಬ್ಬ 2015ರ ಆರ್ಥಿಕ ಸಮಿತಿ ಅಧ್ಯಕ್ಷರಾದ ಡಾ| ಗೋಪಾಲಕೃಷ್ಣ ನಾಯಕ್ ಮತ್ತು ಪ್ರಚಾರ ಸಮಿತಿ ಅಧ್ಯಕ್ಷರಾದ ಡಾ| ಸಚಿನ್ ನಡ್ಕ,  ಕರ್ನಾಟಕ ಆಯುರ್ವೆದೀಕ್ ಕಾಲೇಜಿನ ಡಾ| ಕಾರ್ತಿಕ್, ಶ್ರೀ ಯು.ಕೆ. ಖಲೀದ್, ಡಾ| ಉದಯ್ ಡಿ.ಕೆ., ಡಾ| ಎಲಿಜಬೆತ್ ಪಿ. ಜೋನ್ ಇವರು ಉಪಸ್ಥಿತರಿದ್ದರು.

IMG_5345

1 2 3


Spread the love