ಎಮ್ ಪಿ ಆರ್ ಎಲ್ 4ನೇ ಸ್ಟೇಜ್ ನಲ್ಲಿ ಭೂಮಿ ಕಳೆದುಕೊಂಡವರಿಗೆ ಕೆಲಸ ನೀಡುವ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಐವನ್ ಚರ್ಚೆ

Spread the love

ಎಮ್ ಪಿ ಆರ್ ಎಲ್ 4ನೇ ಸ್ಟೇಜ್ ನಲ್ಲಿ ಭೂಮಿ ಕಳೆದುಕೊಂಡವರಿಗೆ ಕೆಲಸ ನೀಡುವ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಐವನ್ ಚರ್ಚೆ

MRPLನಲ್ಲಿ ಭೂಮಿ ಕಳೆದುಕೊಂಡವರು ತಮ್ಮ ಫಲವತ್ತಾದ ಭೂಮಿಯನ್ನು ನೀಡಿ ಈವರೆಗೆ ಯಾವುದೇ ಕೆಲಸವನ್ನು ನೀಡದೇ ಇರುವ ಬಗ್ಗೆ ಕಾನೂನಿನಲ್ಲಿ ಭೂಮಿ ಕಳೆದುಕೊಂಡವರಿಗೆ ಕೆಲಸವನ್ನು ನೀಡಬೇಕೆಂದು ಇದ್ದರೂ ಅನೇಕ ಹಂತದ ಚರ್ಚೆಗಳು ನಡೆದಿದ್ದು, ಕೂಡಲೇ ಭೂಮಿ ಕಳೆದುಕೊಂಡವರಿಗೆ ಕೆಲಸವನ್ನು ನೀಡಬೇಕು ಎಂದು ಐವನ್ ಡಿʼಸೋಜಾರವರ ನೇತೃತ್ವದ ನಿಯೋಗ ಇಂದು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿತು. ಈ ಬಗ್ಗೆ ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದ್ದು ಭೂಮಿ ಕಳೆಕೊಂಡ ಕುಟುಂಬದ ಸದಸ್ಯರ ಅರ್ಹತೆ ಕೂಡಲೇ ಕೆಲಸದ ನೇಮಕಾತಿ ಅದೇಶವನ್ನು ನೀಡುವುದರ ಬಗ್ಗೆ MRPL ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಯವರು ಚರ್ಚಿಸಿ ಕೂಡಲೇ ಕ್ರಮಕೈಗೊಳ್ಲೂವುದಾಗಿ ತಿಳಿಸಿದರು. ಕೈಗೊಂಡ ಕ್ರಮದ ಬಗ್ಗೆ ವಿವರಿಸಿದರು

ಈ ಸಂದರ್ಭದಲ್ಲಿ ಐವನ್ ಡಿʼಸೋಜಾರವರು ಮಾತನಾಡಿ ಕಾರ್ಖಾನೆಗಳು ಬರಬೇಕು ಅಭಿವೃದ್ದಿ ಆಗಬೇಕು ಎಂಬ ಉದ್ದೇಶವಿರುವುದರಿಂದ ಭೂಮಿ ಕಳೆಕೊಂಡವರಿಗೆ ಉದ್ಯೋಗವನ್ನು ನೀಡಬೇಕು ಅವರ ಪ್ಯಾಕೆಜನ್ನು ಸರಿಯಾದ ಸಮಯಕ್ಕೆ ನೀಡಿದಲ್ಲಿ ಮಾತ್ರ ಅಭಿವೃದ್ದಿ ಹೆಚ್ಚಿನ ಒತ್ತು ನೀಡಿದಂತಾಗುತ್ತದೆ. ಮತ್ತು ಸಾರ್ವಜನಿಕರು ಸಹಕರಿಸುತ್ತಾರೆ. ಈ ಬಗ್ಗೆ ಜಿಲ್ಲಾಡಳಿತ ಯಾವುದೇ ಕಂಪೆನಿಯವರ ಜೊತೆ ಮುಲಾಜಿಲ್ಲದೇ ತಮ್ಮ ಕೆಲಸವನ್ನು ನಿರ್ವಹಿಸುವುದರ ಮೂಲಕ ಉದ್ಯೋಗವನ್ನು ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕುತ್ತೆತೂರ್, ಪರ್ಮುಡೆ ಹಾಗೂ ತೆಂಕಾಯೆಕ್ಕರು ಎಂ.ಆರ್.ಪಿ. ಎಲ್ 4ನೇ ಹಂತದ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳಾದ ಗೌರವಾಧ್ಯಕ್ಷರು ಡೋಣಿ ಸುವೇರಿಸ್, ಅಧ್ಯಕ್ಷರಾದ ಸುಧಾಕರ ಶೆಟ್ಟಿ, ಕಾರ್ಯದರ್ಶಿ ಕೇಶವ ಶೆಟ್ಟಿ, ಕೃಷ್ಣ ಮೂರ್ತಿ, ಬಾಲಕೃಷ್ಣ ಶೆಟ್ಟಿ ಉಪಸ್ಥಿತಿ ಇದ್ದರು


Spread the love
Subscribe
Notify of

0 Comments
Inline Feedbacks
View all comments