ಪ್ರಾಪರ್ಟಿ ಕಾರ್ಡ್ ಗೊಂದಲ: ಕಂದಾಯ ಸಚಿವರಿಗೆ ಶಾಸಕ ಕಾಮತ್ ಮನವಿ

Spread the love

ಪ್ರಾಪರ್ಟಿ ಕಾರ್ಡ್ ಗೊಂದಲ: ಕಂದಾಯ ಸಚಿವರಿಗೆ ಶಾಸಕ ಕಾಮತ್ ಮನವಿ

ಮಂಗಳೂರು: ಮಂಗಳೂರು ತಾಲೂಕಿನ ಭೂಪರಿವರ್ತನೆ, 11ಇ ನಕ್ಷೆ, ಏಕ ನಿವೇಶನಾ ವಿನ್ಯಾಸ, ಖಾತಾ ಮುಂತಾದ ಕಂದಾಯ ಇಲಾಖೆಯ ಸಮಸ್ಯೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವಾಗಲೇ ಇದೀಗ ಪ್ರಾಪರ್ಟಿ ಕಾರ್ಡ್ ಸಮಸ್ಯೆ ಸಾರ್ವಜನಿಕರನ್ನು ಮತ್ತೇ ಸಮಸ್ಯೆಗೆ ಸಿಲುಕಿದೆ. ಇದನ್ನು ತಕ್ಷಣ ಪರಿಹರಿಸಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಸಚಿವರನ್ನು ಆಗ್ರಹಿಸಿದ್ದಾರೆ.

ಕಂದಾಯ ಸಚಿವರಾದ ಆರ್ ವಿ ದೇಶಪಾಂಡೆ ಅವರೊಂದಿಗೆ ಬೆಂಗಳೂರಿನಲ್ಲಿ ಚರ್ಚೆ ನಡೆಸಿದ ಅವರು, ಭೂ ಪರಿವರ್ತನೆ, 11 ಇ ನಕ್ಷೆ ಮತ್ತು ಏಕ ನಿವೇಶನಾ ವಿನ್ಯಾಸದ ಜೊತೆಗೆ ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆಯಿಂದ ಮಂಗಳೂರಿನ ಜನಸಾಮಾನ್ಯರು ಅನುಭವಿಸುತ್ತಿರುವ ಸಮಸ್ಯೆಯ ಬಗ್ಗೆ ಕೂಲಂಕೂಷವಾಗಿ ವಿವರಿಸಿದರು. ಮನವಿಗೆ ಸ್ಪಂದಿಸಿದ ಸಚಿವರು ಈ ಸಮಸ್ಯೆಯನ್ನು ಪರಿಶೀಲಿಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ


Spread the love