ಅಗಸ್ಟ್ 26: ರಾಮಕೃಷ್ಣ ಮಠದಲ್ಲಿ ಆಧ್ಯಾತ್ಮಿಕ ಶಿಬಿರ

Spread the love

ಅಗಸ್ಟ್ 26: ರಾಮಕೃಷ್ಣ ಮಠದಲ್ಲಿ ಆಧ್ಯಾತ್ಮಿಕ ಶಿಬಿರ

ಇದೇ ಅಗಸ್ಟ್ 26, ಆದಿತ್ಯವಾರದಂದು, ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಅಂತರ್ಯೋಗ – ಆಧ್ಯಾತ್ಮಿಕ ಶಿಬಿರ ನಡೆಯಲಿದೆ. ಕಾರ್ಯಕ್ರಮವು ಪೂರ್ವಾಹ್ನ 9 ರಿಂದ ಅಪರಾಹ್ನ 4 ರವೆರೆಗೆ ಜರುಗಲಿದ್ದು ಆಸಕ್ತರಿಗೆ ಪ್ರವೇಶ ಮುಕ್ತವಾಗಿರುತ್ತದೆ. ಆಸಕ್ತರು ತಮ್ಮ ಹೆಸರುಗಳನ್ನು ಆಶ್ರಮದ ಕಾರ್ಯಾಲಯದಲ್ಲಿ ನೋಂದಾಯಿಸಬಹುದು (ಕಾರ್ಯಾಲಯ – 2414412).

ಕಾರ್ಯಕಮದಲ್ಲಿ ಅರ್ಚನೆ, ಭಜನೆ, ಧ್ಯಾನ, ಉಪನ್ಯಾಸ, ಪ್ರಶ್ನೋತ್ತರ ಮತ್ತು ಗಾನಕೀರ್ತನೆ ಕಾರ್ಯಕ್ರಮಗಳಿರುತ್ತದೆ. ಲಂಡನ್ ವೇದಾಂತ ಸೊಸೈಟಿಯ ಹಿಂದಿನ ಮುಖ್ಯಸ್ಥರಾದ ಸ್ವಾಮಿ ದಯಾತ್ಮಾನಂದಜಿಯವರು “ಶ್ರೀ ರಾಮಕೃಷ್ಣರು ಮೆಚ್ಚುವ ಭಕ್ತನಾರು” ಎಂಬ ವಿಷಯವಾಗಿ ಹಾಗೂ ತಿರುಪತಿ ರಾಮಕೃಷ್ಣ ಮಿಷನ್ನಿನ ಮುಖ್ಯಸ್ಥರಾದ ಸ್ವಾಮಿ ಅನುಪಮಾನಂದಜಿಯವರು “ಶಾರದಾದೇವಿ ಮತ್ತು ಪರಿಪೂರ್ಣ ಆಧ್ಯಾತ್ಮಿಕ ಜೀವನ” ಎಂಬ ವಿಷಯವಾಗಿ ಪ್ರವಚನ ನೀಡಲಿರುವರು. ಪ್ರವಚನಗಳ ನಂತರ ಪ್ರಶ್ನೋತ್ತರ ಕಾರ್ಯಕ್ರಮವಿರುತ್ತದೆ.

ಅಪರಾಹ್ನ 2.00 ರಿಂದ 4.00 ರವರೆಗೆ ಬೆಂಗಳೂರಿನ ಖ್ಯಾತ ಗಾಯಕರಾದ ಹುಸೇನ್ ಸಾಬ್ ಕನಕಗಿರಿ ಅವರಿಂದ “ದಾಸವಾಣಿ” ಕಾರ್ಯಕ್ರಮ ನಡೆಯಲಿದೆ.


Spread the love