ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗ ತಾಯಿ ಜಯಂತಿ ನಿಧನ

Spread the love

ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗ ತಾಯಿ ಜಯಂತಿ ನಿಧನ

ಮಂಗಳೂರು: ಹತ್ಯೆಗೀಡಾಗಿದ್ದ ಮಂಗಳೂರಿನ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗ ಅವರ ತಾಯಿ ಭಾನುವಾರ ನಿಧನರಾಗಿದ್ದಾರೆ.

ಅಸೌಖ್ಯದಿಂದ ಕುಸಿದು ಬಿದ್ದು ತಲೆಗೆ ಏಟು ಬಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಜಯಂತಿ ಬಾಳಿಗ (81) ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಮಂಗಳೂರಿನ ಆರ್ ಟಿ ಐ ಕಾರ್ಯಕರ್ತರಾಗಿದ್ದ ವಿನಾಯಕ ಬಾಳಿಗರನ್ನು 2016 ರ ಮಾರ್ಚ್ 21 ರಂದು ಮುಂಜಾನೆ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ವಿನಾಯಕ ಬಾಳಿಗಾ ಸಾವಿನ ಬಳಿಕ ಖಿನ್ನತೆಯಿಂದ ಬಳಲುತ್ತಿದ್ದರು.

ಮೃತರು ಪತಿ ಬಿ ರಾಮಚಂದ್ರ ಬಾಳಿಗ, ನಾಲ್ಕು ಹೆಣ್ಣು ಮಕ್ಕಳಾದ ಶ್ವೇತಾ, ಆಶಾ, ಅನು ಮತ್ತು ಹರ್ಷಾರನ್ನು ಅಗಲಿದ್ದಾರೆ.

ಮೃತರ ಪತಿ ರಾಮಚಂದ್ರ ಬಾಳಿಗ ಮತ್ತು ಜಯಂತಿ ಬಾಳಿಗ ತಮ್ಮ ಮಗನ ಸಾವಿಗೆ ನ್ಯಾಯ ದೊರಕಿಸುವಂತೆ ತಮ್ಮ ಇನ್ನಿಲ್ಲದ ಹೋರಾಟವನ್ನು ಮಾಡುತ್ತಿದ್ದರು. ಅವರ ಹೋರಾಟಕ್ಕೆ ಜಯ ಸಿಗುವುದೆಂಬ ನಿರೀಕ್ಷೆಯಲ್ಲಿದ್ದರು.

ಮೃತರ ಅಂತ್ಯಕ್ರಿಯೆಯು ಜನವರಿ 9 ರಂದು ಮಂಗಳೂರಿನ ಬೋಳಾರ ರುದ್ರಭೂಮಿಯಲ್ಲಿ ನಡೆಯಲ್ಲಿದ್ದು ಭಾನುವಾರ ರಾತ್ರಿಯಿಂದ ಅವರ ನಿವಾಸದಲ್ಲಿ ಅಂತಿಮ ದರ್ಶಕ್ಕೆ ವ್ಯವಸ್ಥೆ ಮಾಡಲಾಗಿದೆ.


Spread the love