ಉಡುಪಿ: ಸ್ಪಂದನ ವಿಶೇಷ ಶಾಲೆಯಲ್ಲಿ ವಿಶ್ವ ಹಾಲು ದಿನದ ಆಚರಣೆ

Spread the love

ಉಡುಪಿ: ದಿನಾಂಕ 01.06.2015 ರಂದು ‘ವಿಶ್ವ ಹಾಲು ದಿನಾಚರಣೆ’ ಅಂಗವಾಗಿ ದಕ್ಷಿಣ ಕನ್ನಡ ಹಾಲು ಒಕ್ಕೂಟದ, ಮಣಿಪಾಲ ಡೇರಿ ಘಟಕದ ವತಿಯಿಂದ, ಉಡುಪಿಯ ನೇಜಾರಿನ ‘ಸ್ಪಂದನ’ ನಿಲಯದ ವಿಶೇಷ ಮಕ್ಕಳಿಗೆ ಹಾಲು ಮತ್ತು ಹಣ್ಣು ಹಂಪಲುಗಳನ್ನು ವಿತರಿಸಲಾಯಿತು

0JK_3116 0JK_3117 0JK_3119 0JK_3120 0JK_3122 0JK_3125 0JK_3128

 ಸಭೆಯ ಅಧ್ಯಕ್ಷತೆಯನ್ನು ಹೊಂದಿದ್ದ ಶ್ರೀ. ಟಿ.ಲಕ್ಕಪ್ಪ, ಉಪ ವ್ಯವಸ್ಥಾಪಕರು(ಮಾರುಕಟ್ಟೆ) ಇವರು ವಿಶ್ವ ಹಾಲು ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿ, ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಒಕ್ಕೂಟದ ಇತರ ಅಧಿಕಾರಿಗಳಾದ  ಮಹೇಶ್, ಸಂದೀಪ್ ನಾಯ್ಕ,  ವಿಷ್ಣು  ಹಾಗೂ ಹಾಲು ವಿತರಣಾ ವಾಹನದ ಗುತ್ತಿಗೆದಾರರಾದ ಶ್ರೀ. ಜನಾರ್ದನ ಪೂಜಾರಿ ಮತ್ತು ಶ್ರೀ. ಗಣೇಶ್ ಇವರು ಉಪಸ್ಥಿತರಿದ್ದರು.


Spread the love