ಕೆ.ಪಿ.ಸಿ.ಸಿ.ಮಾಧ್ಯಮ ವಕ್ತಾರರಾಗಿ ಶೌವಾದ್ ಗೂನಡ್ಕ ನೇಮಕ

Spread the love

ಕೆ.ಪಿ.ಸಿ.ಸಿ.ಮಾಧ್ಯಮ ವಕ್ತಾರರಾಗಿ ಶೌವಾದ್ ಗೂನಡ್ಕ ನೇಮಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮೀಡಿಯಾ ಪ್ಯಾನಲಿಸ್ಟ್ (ಮಾಧ್ಯಮ ವಕ್ತಾರ) ಆಗಿ NSUI ಮುಖಂಡ ಶೌವಾದ್ ಗೂನಡ್ಕರವರನ್ನು ನೇಮಕಗೊಳಿಸಿ ಕೆ.ಪಿ.ಸಿ.ಸಿ.ಆಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಆದೇಶವನ್ನು ಹೊರಡಿಸಿದ್ದಾರೆ.

ತಮ್ಮ 24 ನೇ ವಯಸ್ಸಿಗೆ ಕೆ.ಪಿ.ಸಿ.ಸಿ.ಗೆ ನೇಮಕಗೊಳ್ಳುವ ಮೂಲಕ ಶೌವಾದ್ ಗೂನಡ್ಕರವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಸ್ಥಾನವನ್ನು ಪಡೆದಂತಹ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶೌವಾದ್ ಗೂನಡ್ಕರವರ ಸಂಘಟನಾ ಹಾಗೂ ವಾಕ್ ಚಾತುರ್ಯತೆಯನ್ನು ಗುರುತಿಸಿ ಡಿ.ಕೆ.ಶಿವಕುಮಾರ್ ರವರು ಈ ಮಹತ್ವದ ಜವಬ್ದಾರಿಯನ್ನು ನೀಡಿದ್ದು, ರಾಜ್ಯದ ಪತ್ರಿಕೆ, ಟಿ.ವಿ.ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಶೌವಾದ್ ಗೂನಡ್ಕರವರು ರಾಜ್ಯ ಕಾಂಗ್ರೆಸ್ ನ್ನು ಪ್ರತಿನಿಧಿಸಲಿದ್ದಾರೆ.

ಇವರು ಈ ಹಿಂದೆ NSUI ಕಾಲೇಜು ಘಟಕದ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ NSUI ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ, ಜಿಲ್ಲಾ NSUI ಸಮಿತಿಯ ಉಪಾಧ್ಯಕ್ಷರಾಗಿ, ಕಾಲೇಜು ಹಂತದಲ್ಲಿ ವಿದ್ಯಾರ್ಥಿ ಸಂಘ ಹಾಗೂ NSS ಘಟಕದ ನಾಯಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞ ಗೂನಡ್ಕ ಹಾಗೂ ಹಾಜಿರಾ ದಂಪತಿಗಳ ಕಿರಿಯ ಪುತ್ರರಾಗಿರುವ ಶೌವಾದ್ ಗೂನಡ್ಕರವರು ಮಂಗಳೂರಿನ ರೋಶನಿ ನಿಲಯ ಕಾಲೇಜಿನ ಸಮಾಜಕಾರ್ಯ ವಿಭಾಗದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದು ಪ್ರಸ್ತುತ ಮಂಗಳೂರಿನ ಎಸ್.ಡಿ.ಎಂ.ಕಾನೂನು ಕಾಲೇಜಿನಲ್ಲಿ ಅಂತಿಮ ವರ್ಷದ LLB ವ್ಯಾಸಾಂಗ ಮಾಡುತ್ತಿದ್ದಾರೆ.


Spread the love