ಗ್ಯಾಸ್ ಮತ್ತು ಪಡಿತರ ಬಳಕೆದಾರರ ವೇದಿಕೆ ಅಧ್ಯಕ್ಷರಾಗಿ ವಿಶ್ವನಾಥ್ ಕೆ.ಬಿ. ಆಯ್ಕೆ

Spread the love

ಗ್ಯಾಸ್ ಮತ್ತು ಪಡಿತರ ಬಳಕೆದಾರರ ವೇದಿಕೆ ಅಧ್ಯಕ್ಷರಾಗಿ ವಿಶ್ವನಾಥ್ ಕೆ.ಬಿ. ಆಯ್ಕೆ

ಮಂಗಳೂರು: ಗ್ಯಾಸ್ ಮತ್ತು ಪಡಿತರ ಬಳಕೆದಾರರ ವೇದಿಕೆಯ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಕೆ.ಬಿ. ಆಯ್ಕೆಯಾಗಿದ್ದಾರೆ.

vishwanath-kb

ಇತ್ತೀಚೆಗೆ ಮಂಗಳೂರಿನ ಹಿದಾಯತ್ ಸೆಂಟರ್‍ನಲ್ಲಿ ನಡೆದ ವೇದಿಕೆಯ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ಇವರು ಇದೀಗ ಸಮಾಜ ಸೇವಾ ಸಹಕಾರಿ ಬ್ಯಾಂಕ್ ಬಂಟ್ವಾಳ ಇದರ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತರ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಧರ್ಮೇಂದ್ರ ಕೆ., ಉಪಾಧ್ಯಕ್ಷರುಗಳಾಗಿ ರೇಖಾ ಬಾಳಿಗ, ವಿಷ್ಣುಪ್ರಸಾದ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸಿದ್ದೀಕ್ ಜಕ್ರಿಬೆಟ್ಟು, ಸಂಘಟನಾ ಕಾರ್ಯದರ್ಶಿಗಳಾಗಿ ಅಬ್ದುಸ್ಸಲಾಮ್ ಸಿ.ಎಚ್. ಉಳ್ಳಾಲ, ಕೇಶವ ಉಜ್ಜೋಡಿ ಪತ್ರಿಕಾ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಹ್ಸಿನ್, ಕೋಶಾಧಿಕಾರಿಯಾಗಿ ಆಯಿಶಾ ಮಮ್ತಾಝ್ ವಾಮಂಜೂರು, ಇತರ ಸದಸ್ಯರುಗಳಾಗಿ ಅಬ್ದುರ್ರಹ್ಮಾನ್ ಬೀರಿ, ಕೆ.ಕೆ. ಪೂಜಾರಿ, ಶಂಶೀರ್ ಮೆಲ್ಕಾರ್, ಪುರುಷೋತ್ತಮ ಕೋಟ್ಯಾನ್, ಸದಾನಂದ, ಮುನೀರ್ ಕಲ್ಲಾಡಿ, ಆಯ್ಕೆಯಾಗಿದ್ದಾರೆ.


Spread the love