ತಾಯಿಗೆ ಹಲ್ಲೆ ನಡೆಸಿದ್ದಕ್ಕೆ ಯುವಕನಿಂದ ಕುಡುಕನ ಮೇಲೆ ಹಲ್ಲೆ

Spread the love

ತಾಯಿಗೆ ಹಲ್ಲೆ ನಡೆಸಿದ್ದಕ್ಕೆ ಯುವಕನಿಂದ ಕುಡುಕನ ಮೇಲೆ ಹಲ್ಲೆ

ಮಂಗಳೂರು: ಯುವಕನೋರ್ವನ ತಾಯಿಗೆ ಮೈ ಮೇಲೆ ಕೈ ಹಾಕಿದ ಕುಡಕ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿದ ಪರಿಣಾಮ ಕುಡುಕ ವ್ಯಕ್ತಿ ಆಸ್ಪತ್ರೆಗೆ ದಾಖಲಾದ ಘಟನೆ ಕದ್ರಿಯಲ್ಲಿ ನಡೆದಿದೆ.

ಗೋಪಿನಾಥ್ ಸೂಟರ್ ಪೇಟೆ ಎಂಬವರು ಕದ್ರಿಯಲ್ಲಿ ಆಯೋಜಿಸಿದ ಮೊಸರು ಕುಡಿಕೆ ಕಾರ್ಯಕ್ರಮ ವೀಕ್ಷೀಷಲು ಬಂದಿದ್ದರು ಎನ್ನಲಾಗಿದೆ.

ಪ್ರಶಾಂತ್ ಎಂಬ ಯುವಕ ತನ್ನ ತಾಯಿ ಹಾಗೂ ಸಹೋದರಿಯೊಂದಿಗೆ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದು, ಮಧ್ಯರಾತ್ರಿಯ ಸಮಯದಲ್ಲಿ ಪ್ರಶಾಂತ್ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ವಾಪಾಸು ಹೋಗಲು ಹೊರಟಾಗ ಗೋಪಿನಾಥ್ ಪ್ರಶಾಂತ್ ತಾಯಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಮೈ ಮೇಲೆ ಕೈ ಹಾಕಿದ್ದುಇದರಿಂದ ಸಿಟ್ಟಿಗೆದ್ದ ಪ್ರಶಾಂತ್ ಗೋಪಿನಾಥ್ ಮೇಳೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ.

ಕುಡಿದ ಮತ್ತಿನಲ್ಲಿದ್ದ ಗೋಪಿನಾಥ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಕದ್ರಿ ಪೋಲಿಸರು ಆಸ್ಪತ್ರೆಗೆ ದಾಖಲಿಸಿದ್ದರು.


Spread the love