ನೀರಿನ ಹೊಂಡಕ್ಕೆ ಮಗುಚಿ ಬಿದ್ದ ಟಿಪ್ಪರ್ ; ಇಬ್ಬರು ಮೃತ್ಯು

Spread the love

ನೀರಿನ ಹೊಂಡಕ್ಕೆ ಮಗುಚಿ ಬಿದ್ದ ಟಿಪ್ಪರ್ ; ಇಬ್ಬರು ಮೃತ್ಯು

ಕಾರ್ಕಳ : ಟಿಪ್ಪರ್ ಒಂದು ನೀರಿನ ಹೊಂಡಕ್ಕೆ ಮಗುಚಿ ಬಿದ್ದ ಪರಿಣಾಮ ಇಬ್ಬರು ಸಾವನಪ್ಪಿದ ಘಟನೆ ಕಾರ್ಕಳ ತಾಲೂಕಿನ ಪಳ್ಳಿ-ನಿಂಜೂರಿನಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.

ಮೃತರನ್ನು ಟಿಪ್ಪರ್ ಚಾಲಕ ಕಾರ್ಕಳ ಗಣಿತನಗರದ ನಿವಾಸಿ ಅರುಣ್ ಕುಮಾರ್ (40) ಮತ್ತು ಲಾರಿಯಲ್ಲಿದ್ದ ಮತ್ತೋರ್ವ ಕಿಶೋರ್ (18) ಮೃತಪಟ್ಟಿದ್ದಾರೆ.

ಸಂಜೆ ವೇಳೆ ಮಣ್ಣು ತರಲೆಂದು ತೆರಳಿದ್ದ ಟಿಪ್ಪರ್ ನಿಂಜೂರು ಗ್ರಾಮದ ಮದಗ ಎಂಬಲ್ಲಿ ರಸ್ತೆಯಿಂದ ಪಕ್ಕಕ್ಕೆ ಸರಿದಿದೆ. ಈ ವೇಳೆ ನಿಯಂತ್ರಣ ತಪ್ಪಿ ನೀರು ತುಂಬಿದ ಮದಗಕ್ಕೆ ಮಗುಚಿ ಬಿದ್ದಿದೆ. ಟಿಪ್ಪರ್ ಒಳಗಿದ್ದ ಇಬ್ಬರಿಗೂ ಹೊರಬರಲಾಗದೇ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love