ನೆರೆಯಿಂದ ಮನೆ ಹಾನಿಯಾದ ಸಿಬ್ಬಂದಿಗೆ ಸಹಾಯ ಹಸ್ತ 

Spread the love

ನೆರೆಯಿಂದ ಮನೆ ಹಾನಿಯಾದ ಸಿಬ್ಬಂದಿಗೆ ಸಹಾಯ ಹಸ್ತ 

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಗೃಹರಕ್ಷಕದಳ ಬೆಳ್ತಂಗಡಿ ಘಟಕದ ಗೃಹರಕ್ಷಕದಳ ಸಿಬ್ಬಂದಿ ಧರ್ಮಸ್ಥಳ ಠಾಣೆಯಲ್ಲಿ ಗೃಹರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಾಕ್ಷ ಎಂಬವರು ಹೊಸದಾಗಿ ನಿರ್ಮಿಸಿರುವ ಮನೆ ಭಾರೀ ಮಳೆಯಿಂದಾಗಿ ನೆರೆ ಬಂದ ಹಿನ್ನೆಲೆಯಲ್ಲಿ ಭಾಗಶ: ಹಾನಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಆಗಸ್ಟ್ 8 ರಂದು ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಠರಾದ ಡಾ. ಮುರಲೀ ಮೋಹನ್ ಚೂಂತಾರು ಹಾಗೂ ಉಪ ಸಮಾದೇಷ್ಠರಾದ ರಮೇಶ್ ರವರು ಭೇಟಿ ನೀಡಿ ಜಿಲ್ಲಾ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ಸಂಗ್ರಹಿಸಿದ 11,111/- ನಗದು ಹಣ ಹಾಗೂ 25 ಕೆ.ಜಿ. ಅಕ್ಕಿಯನ್ನು ಸಂತ್ರಸ್ತ ಶಿವಾಕ್ಷ ರವರಿಗೆ ಅವರ ಬೆಳ್ತಂಗಡಿ ಸಮೀಪದ ನಿವಾಸದಲ್ಲಿ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಹಾಗೂ ಉಪ ಸಮಾದೇಷ್ಠರಾದ ರಮೇಶ್ ಹಾಗೂ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love