ನೆಹರು ಯುವ ಕೇಂದ್ರ ಜಿಲ್ಲಾ ಯುವ ಸಮನ್ವಯಾಧಿಕಾರಿಯಾಗಿ ವಿಲ್ಫ್ರೆಡ್ ಡಿಸೋಜಾ ನೇಮಕ

Spread the love

 ನೆಹರು ಯುವ ಕೇಂದ್ರ ಜಿಲ್ಲಾ ಯುವ ಸಮನ್ವಯಾಧಿಕಾರಿಯಾಗಿ ವಿಲ್ಫ್ರೆಡ್ ಡಿಸೋಜಾ ನೇಮಕ

ಉಡುಪಿ: ವಿಲ್ಫ್ರೆಡ್ ಡಿಸೋಜಾ ಇವರು ಉಡುಪಿಯ ನೆಹರು ಯುವ ಕೇಂದ್ರದಲ್ಲಿನ  ಜಿಲ್ಲಾ ಯುವಜನ ಸಮನ್ವಯಾಧಿಕಾರಿಯಾಗಿ ನೇಮಕಗೊಂಡಿರುತ್ತಾರೆ. ಶ್ರೀಯುತರು ಮಹಾನಿರ್ದೇಶಕರು, ನೆಹರು ಯುವ ಕೇಂದ್ರ ಸಂಘಟನೆ, ಕ್ರೀಡಾ & ಯುವಜನ ಸೇವೆಗಳ ಮಂತ್ರಾಲಯದ ಸ್ವಾಯತ್ತ ಸಂಸ್ಥೆ, ಭಾರತ ಸರ್ಕಾರದ ವತಿಯಿಂದ ನಿಯೋಜನೆಗೊಂಡಿರುತ್ತಾರೆ.  ಸದರಿಯವರು ಜೆಸಿಂತಾ ಡಿ’ಸೋಜಾ  ಇವರಿಂದ ದಿನಾಂಕ 13ನೇ ಏಪ್ರಿಲ್, 2017ರಂದು ಅಧಿಕಾರ ಸ್ವೀಕಾರ ಮಾಡಿದರು.

ವಿಲ್ಫ್ರೆಡ್ ಡಿಸೋಜಾ, ಇವರು ಹೊಸ ಹುದ್ದೆಯ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಪೂರ್ವದಲ್ಲಿ ಪ್ರಖ್ಯಾತ ಹರಿಯಾಣ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಹರಿಯಾಣ ಸರ್ಕಾರದ ಫರೀದಾಬಾದ್‍ನಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ  ರಾಷ್ಟ್ರೀಯ ರಾಜಧಾನಿ ಪ್ರದೇಶ, ನವದೆಹಲಿಯನ್ನೊಳಗೊಂಡಂತೆ ಹಾಗೂ ಹರಿಯಾಣ ಪ್ರವಾಸೋದ್ಯಮ ಇಲಾಖೆಯ ಹೆಡ್‍ಕಾರ್ಟರ್ ಚಂಢೀಘಡದಲ್ಲೂ ಸರ್ಕಾರದ ಉಚ್ಛಾಧಿಕಾರಿಗಳ ಜೊತೆಗೆ ಕರ್ತವ್ಯ ನಿರ್ವಹಿಸಿದ ಅಪಾರ ಅನುಭವವನ್ನು ಹೊಂದಿರುತ್ತಾರೆ. ಶ್ರೀಯುತರು ಕರ್ತವ್ಯದಲ್ಲಿ ನುರಿತ ಹಾಗೂ ಅನುಭವಶಾಲಿಗಳಾಗಿದ್ದು, ಅವರು ವಿವಿಧ ಕ್ಷೇತ್ರಗಳಾದ ಸಾರ್ವಜನಿಕ ಸಂಪರ್ಕ, ಶಿಷ್ಟಾಚಾರ & ಸಮನ್ವಯ & ಸಹಭಾಗಿತ್ವದ ಕೆಲಸಕಾರ್ಯಗಳಲ್ಲಿ ತಮ್ಮನ್ನು ತಾವು ವೈಯುಕ್ತಿಕವಾಗಿ ತೊಡಗಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಶ್ರೀಮಂತ ಅನುಭವವನ್ನು ಹೊಂದಿರುತ್ತಾರೆ.

ಡಿಸೋಜಾ ಇವರು ಹಣ ಹೂಡಿಕೆದಾರರುಗಳಿಂದ (ಅಂದರೆ; ಹಣ ಸಂಗ್ರಹಿಸುವಿಕೆಯಲ್ಲಿ ಮತ್ತು ಗಣ್ಯ ವ್ಯಕ್ತಿಗಳ ಶಿಷ್ಟಾಚಾರದ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ) ಅತ್ಯುತ್ತಮ ಸೇವೆ ಸಲ್ಲಿಸಿರುತ್ತಾರೆ. ಪ್ರತಿವರ್ಷ ಸೂರಜ್ ಕುಂಡ್ ನಲ್ಲಿ ಏರ್ಪಡಿಸಲಾಗುವ ವಿಶ್ವವಿಖ್ಯಾತ ವಾರ್ಷಿಕ ಅಂತರಾಷ್ಟ್ರೀಯ ಕಲಾ ಮೇಳ ಆಯೋಜಿಸುವಲ್ಲಿ ಸಫಲರಾಗಿ ಮುಂಚೂಣಿಯಲ್ಲಿರುತ್ತಾರೆ. ಅಲ್ಲದೆ, ದೇಶದಲ್ಲಿಯೇ ಅತ್ಯುತ್ತಮವಾದ ಕರಕುಶಲಕಲೆಗಳು & ಕೈಮಗ್ಗದ ಕಲೆಗಳು ಪ್ರದರ್ಶನಗೊಳ್ಳಲು ಈ ಮೇಳ ಅತ್ಯಂತ ಪ್ರಖ್ಯಾತಿಗಳಿಸುವಲ್ಲಿ ಶ್ರೀಯುತರು ಕಳೆದ 25 ವರ್ಷದಿಂದ ಶ್ರಮಿಸಿದ್ದಾರೆÉ

ಶ್ರೀಯುತರು ಅರ್ಥಶಾಸ್ತ್ರ ಪದವೀದರರಾಗಿದ್ದು, ಸಾರ್ವಜನಿಕ ಸಂಪರ್ಕಗಳು & ಜಾಹೀರಾತು ವಿಭಾಗದಲ್ಲಿ ಪೋಸ್ಟ್ ಗ್ರಾಜ್ಯುಯೇಟ್ ಹೊಂದಿರುತ್ತಾರೆ. ಅಲ್ಲದೆ, ಶ್ರೀಯುತರು ಎಂ.ಬಿ.ಎ. ಪದವಿಯನ್ನು ಮಾನವ ಸಂಪನ್ಮೂಲ ಅಭಿವೃದ್ದಿ ವ್ಯವಸ್ಥಾಪನೆ & ತರಬೇತಿಯಲ್ಲಿ ಹೊಂದಿರುತ್ತಾರೆ. ಡಿಸೋಜಾ ಇವರ ಸ್ವಗ್ರಾಮವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೋಕು ಆಗಿರುತ್ತದೆ.

ಡಿಸೋಜಾ ಇವರು ನೆಹರು ಯುವ ಕೇಂದ್ರ ಸಂಘಟನೆಯ ಭವಿಷ್ಯದ ಆಶೋತ್ತರಗಳನ್ನು ಈಡೇರಿಸುವಿಕೆಯಲ್ಲಿ ತಮ್ಮ ಪ್ರಮುಖ ಪಾತ್ರವನ್ನು ನಿರ್ವಹಿಸಲು ಸದಾ ಸನ್ನದ್ಧರಾಗಿರುತ್ತಾರೆ. ಅಂದರೆ, ಗ್ರಾಮೀಣ ಯುವಜನರನ್ನು ರಾಷ್ಟ್ರ ನಿರ್ಮಾಣಕ್ಕೆ ತೊಡಗಿಸಿಕೊಂಡು ಅವರುಗಳಲ್ಲಿ ಒಳ್ಳೆಯ ಭಾವನೆಗಳನ್ನು ಪ್ರೋತ್ಸಾಹಿಸಿ ಜವಾಬ್ದಾರಿಯುತ ನಾಗರೀಕರಾಗಿ ಮಾದರಿ ಪ್ರಜಾಪ್ರಭುತ್ವ ಹಾಗೂ ಇಡೀ ರಾಷ್ಟ್ರದ ಸರ್ವತೋಮುಖ ಏಳಿಗೆ ಹಾಗೂ ಅಭಿವೃದ್ದಿಗಾಗಿ ಸದಾ ಶ್ರಮಿಸಲು ಉತ್ಸಾಹಿಯಾಗಿರುತ್ತಾರೆ. ನೆಹರು ಯುವ ಕೇಂದ್ರ ಸಂಘಟನೆಯು ಯುವಕರನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಹಲವಾರು ಕ್ಷೇತ್ರಗಳಲ್ಲಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಯುವಜನ ಸೇವೆಗಳ ಮಂತ್ರಾಲಯದಿಂದ ಹಾಗೂ ಕೆಲವು ವಿಶೇಷ ಕಾರ್ಯಕ್ರಮಗಳು ಹಾಗೂ ಇನ್ನಿತರೆ ಮಂತ್ರಾಲಯಗಳ ಸಹಾಯ-ಸಹಕಾರಗಳಿಂದ ಸದಾ ಕಾರ್ಯೋನ್ಮುಖವಾಗಿದೆ.

ನೆಹರು ಯುವ ಕೇಂದ್ರ ಸಂಘಟನೆಯ ಭವಿಷ್ಯದ ಉದ್ದೇಶ ಸದಾಕಾಲ ಒಳ್ಳೆಯ ನಾಗರೀಕತೆ ಮತ್ತು ಯುವಜನರಲ್ಲಿ ಮುಂದಾಳತ್ವವನ್ನು ಬೆಳೆಯುವ ಮೊಳಕೆಯಲ್ಲಿಯೇ ಕಾಣಬಯಸುತ್ತದೆ. ಯುವ ಕ್ಲಬ್‍ಗಳನ್ನು ರಚಿಸಲಾಗಿದೆ ಮತ್ತು ಅವುಗಳಿಂದ ಯುವಕರನ್ನು ಪ್ರೋತ್ಸಾಹಿಸಿ, ಕ್ರೀಡೆ, ಸಾಂಸ್ಕøತಿಕ ಮತ್ತು ಸ್ಥಳೀಯ ಚಟುವಟಿಕೆಗಳಲ್ಲಿ ಅಭಿವೃದ್ದಿ ಕಾಣಲು ಸದಾ ಮುಂಚೂಣಿಯಲ್ಲಿದೆ.  ಯುವಕರಲ್ಲಿ ಮುಂದಾಳತ್ವವನ್ನು ರೂಪಿಸಲು ಯುವ ಕ್ಲಬ್ ಗಳು ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಈ ಮುಂದಾಳತ್ಮವು ಈ ಕೆಳಕಂಡ ಚಟುವಟಿಕೆಗಳಲ್ಲಿ ಅತ್ಯಂತ ಸಹಾಯ-ಸಹಕಾರಿಯಾಗಿದೆ.

  1. ಸ್ವಯಂ ಸೇವಕರನ್ನೊಳಗೊಂಡ ನೆಟ್ ವರ್ಕ್
  2. ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸಲು ಅತ್ಯಂತ ಪರಿಣಾಮಕಾರಿಯಾಗಿ ಭಾಗವಹಿಸುವಿಕೆ ಅಂದರೆ, ಅಭಿವೃದ್ಧಿ
  3. ಯುವಜನರಲ್ಲಿ ಉತ್ಸಾಹ ತುಂಬುವ ಸಲುವಾಗಿ, ಕುಶಲ ಕೆಲಸ ಕಾರ್ಯಗಳು, ಆರೋಗ್ಯ, ಜೀವನ ಶೈಲಿ, ಸ್ವ-ಉದ್ಯೋಗ ಕುರಿತು ಅರಿವು ಮೂಡಿಸುವುದು.

ಈ ಮೇಲ್ಕಂಡ ಅಂಶಗಳನ್ನು ಪರಿಗಣಿಸಿ, ಭಾರತದ ಜನಸಂಖ್ಯೆಯ ನಾಲ್ಕನೆ ಮೂರರಷ್ಟು ಜನಸಂಖ್ಯೆಯು ಗ್ರಾಮೀಣರಾಗಿರುತ್ತಾರೆ. ಒಟ್ಟಾರೆ ರಾಷ್ಟ್ರದ ಅಭಿವೃದ್ದಿಯು ಗ್ರಾಮೀಣ ಯುವಜನರುಗಳ ಪ್ರಗತಿ ಮತ್ತು ಆಧಾರದ ಮೇಲೆ ಅವಲಂಬಿಸಿದೆ. ಆದುದರಿಂದ, ದೇಶದ ಅಭಿವೃದ್ದಿಗಾಗಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ದಿಸೆಯಲ್ಲಿ ಬೃಹತ್ ಸಂಸ್ಥೆಯಾದ ನೆಹರು ಯುವ ಕೇಂದ್ರ ಸಂಘಟನೆಯು ಹೆಚ್ಚು ಹೆಚ್ಚು ಯುವಕರನ್ನು ಅಳವಡಿಸಿಕೊಂಡು ವಿವಿಧ ಯುವ ಕಾರ್ಯಕ್ರಮಗಳನ್ನು ಕೈಗೊಂಡು ಯುವಶಕ್ತಿಗೆ ಭವಿಷ್ಯದ ದಾರಿದೀಪವಾಗಿದೆ ಎಂದು ಈ ಮೂಲಕ ಪ್ರಮಾಣೀಕರಿಸುತ್ತದೆ.

ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಯುವಕ ಯುವತಿ ಮಹಿಳಾ ಮಂಡಲದ ಸದಸ್ಯರು ಭಾರತ ಸರ್ಕಾರದ ನೆಹರು ಯುವ ಕೇಂದ್ರದಿಂದ ಮೂಡಿ ಬರುವ ಕಾರ್ಯಕ್ರಮವನ್ನು ಅಥವಾ ಇನ್ನಾವುದೇ ಸಾಮಾಜಿಕ ಗ್ರಾಮೀಣ ಕಾರ್ಯಕ್ರಮವನ್ನು ನಡೆಸುವರೇ ವಿಲ್ಫ್ರೆಡ್ ಡಿಸೋಜಾ ಜಿಲ್ಲಾ ಯುವ ಸಮನ್ವಯಾಧಿಕಾರಿ ನೆಹರು ಯುವ ಕೇಂದ್ರ ಉಡುಪಿ ಇವರನ್ನು ಮುಖತಃ ಭೇಟಿ ಮಾಡಿ ಅಥವಾ ದೂರವಾಣಿ ಸಂಖ್ಯೆ 0820-2574992 ಮುಖೇನ ಸಂಪರ್ಕಿಸಬಹುದು.

 


Spread the love