ಬಸ್ಸುಗಳಿಗೆ ಕಲ್ಲುತೂರಾಟ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಪ್ರಶಂಸಿದ ಕಮೀಷನರ್

Spread the love

ಬಸ್ಸುಗಳಿಗೆ ಕಲ್ಲುತೂರಾಟ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಪ್ರಶಂಸಿದ ಕಮೀಷನರ್

ಮಂಗಳೂರು: ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಿದ ಆರೋಪಿಗಳನ್ನು ಹಿಡಿದಿರುವುದಕ್ಕಾಗಿ ಪೊಲೀಸ್ ಆಯುಕ್ತ ಡಾ.ಹರ್ಷ ಸೆಪ್ಟೆಂಬರ್ 6 ರಂದು ಮೂವರು ಹೆಡ್ ಕಾನ್ಸ್ಟೆಬಲ್ಗಳು ಸೇರಿದಂತೆ ಐದು ಪೊಲೀಸ್ ಕಾನ್ಸ್ಟೆಬಲ್ಗಳಿಗೆ ಮೆಚ್ಚುಗೆ ಪತ್ರಗಳನ್ನು ನೀಡಿದರು.

ಹೆಡ್ ಕಾನ್ಸ್ಟೆಬಲ್ಗಳಾದ ಪ್ರಶಾಂತ್ ಶೆಟ್ಟಿ, ಜಯಾನಂದ್ ಮತ್ತು ವಿಶ್ವನಾಥ್, ಪೊಲೀಸ್ ಕಾನ್ಸ್ಟೆಬಲ್ಗಳಾದ ರಾಘವೇಂದ್ರ ಮತ್ತು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಆನಂದ್ ಅವರು ಕಲ್ಲು ತೂರಾಟಗಾರರನ್ನು ಬಂಧಿಸುವ ಮೂಲಕ ಮತ್ತು ಭೂಕುಸಿತದ ಸಮಯದಲ್ಲಿ ನಿವಾಸಿಗಳನ್ನು ರಕ್ಷಿಸುವ ಮೂಲಕ ಶ್ಲಾಘನೀಯ ಕೆಲಸವನ್ನು ಮಾಡಿದ್ದಾರೆ. ಉತ್ತಮವಾಗಿ ಕೆಲಸ ಮಾಡಿದ ಬಗ್ಗೆ ಮೆಚ್ಚುಗೆಯಾಗಿ, ಅವರಿಗೆ ಪೊಲೀಸ್ ಆಯುಕ್ತ ಡಾ.ಹರ್ಷ ಅವರು ಮೆಚ್ಚುಗೆಯ ಪತ್ರಗಳನ್ನು ನೀಡಿದರು.

ಸೆಪ್ಟೆಂಬರ್ 3 ರಂದು ಡಿ ಕೆ ಶಿವಕುಮಾರ್ ಅವರ ಬಂಧನದ ವಿರುದ್ಧ ರಾಜ್ಯಮಟ್ಟದ ಪ್ರತಿಭಟನೆಗೆ ಕಾಂಗ್ರೆಸ್ ಕರೆ ನೀಡಿತ್ತು. ಪ್ರತಿಭಟನೆಯ ಲಾಭವನ್ನು ಪಡೆದ ದುಷ್ಕರ್ಮಿಗಳು ಫಲ್ನೀರ್, ನಂದಿಗುದ್ದ ಮತ್ತು ಇತರ ಸ್ಥಳಗಳಲ್ಲಿನ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು.

ಮಂಗಳೂರು ಪೂರ್ವ ಪೊಲೀಸರು ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಕಾರಣ, ಬಸ್ಸಿಗೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದ ಇಬ್ಬರು ಯುವಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.
ಸೆಪ್ಟೆಂಬರ್ 6 ರಂದು ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ನಾಯಕತ್ವದಲ್ಲಿ ಮಂಗಳೂರು ಪೂರ್ವ ಪೊಲೀಸರು ಅಬುಲ್ ಮನ್ನನ್ ಮತ್ತು ಮಹಿನ್ ಅಬ್ದುಲ್ ಅವರನ್ನು ಬಂಧಿಸಿದರು.


Spread the love