ಬೆಂಗ್ರೆ ವಲಯ ಜೆಡಿಎಸ್ ಬೂತ್ ಕಮಿಟಿ ಮಟ್ಟದ ಕಾರ್ಯಕರ್ತರ ಸಭೆ

Spread the love

ಬೆಂಗ್ರೆ ವಲಯ ಜೆಡಿಎಸ್ ಬೂತ್ ಕಮಿಟಿ ಮಟ್ಟದ ಕಾರ್ಯಕರ್ತರ ಸಭೆ

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ  ವಸಂತ ಪೂಜಾರಿ  ಅವರ ನೇತೃತ್ವದಲ್ಲಿ ಬೆಂಗ್ರೆ ವಲಯ ಜಾತ್ಯತೀತ ಜನತಾದಳ ಬೂತ್ ಮಟ್ಟದ ಕಾರ್ಯಕರ್ತರ ಸಭೆಯ ನಡೆಯಿತು.

ಈ ವೇಳೆ ಮಾತನಾಡಿದ ವಸಂತ್ ಪೂಜಾರಿ  ಅವರು ಬೂತ್ ಮಟ್ಟದಿಂದ ಪಕ್ಷವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎಲ್ಲ ಬೂತ್ ಕಮಿಟಿಯನ್ನು ರಚಿಸಲಾಗುತ್ತಿದ್ದು. ಈ ನಿಟ್ಟಿನಲ್ಲಿ ಮುಂದಿನ ಮುಖ್ಯಮಂತ್ರಿಯಾಗಿ. ಕುಮಾರಸ್ವಾಮಿಯವರು ಅಧಿಕಾರ ವಹಿಸುವ ಅವಧಿ ಬಂದಿದೆ ಈ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರು ಒಗ್ಗೂಡಿ ಪಕ್ಷ ಸಂಘಟನೆಯನ್ನು ಮಾಡಬೇಕು. ಬೇರು ಮಟ್ಟದಿಂದ ಪಕ್ಷವನ್ನು ಗಟ್ಟಿಗೊಳಿಸಿ ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಶಾಸಕರನ್ನು ಕೂಡ ಆಯ್ಕೆ ಮಾಡಬೇಕು ಎಂದು ಅವರು ಮಾತನಾಡಿದರು.

ಜಿಲ್ಲಾ ಕಾರ್ಯಧ್ಯಕ್ಷರಾದ ರಾಮ್ ಗಣೇಶ್. ಯುವ ಜನತಾ ದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ, ಜಿಲ್ಲಾ ಯುವ ಮಹಾ ಪ್ರಧಾನ ಕಾರ್ಯದರ್ಶಿ ಮಧುಸೂದನ ಗೌಡ, ಜಿಲ್ಲಾ ಯುವ ಕಾರ್ಯದರ್ಶಿ ಅರ್ಷಕ್ ಇಸ್ಮಾಯಿಲ್, ಜಿಲ್ಲಾ ಯುವ ನಾಯಕ ಸಂದೀಪ್ ಕೋಟ್ಯಾನ್, ವಲಯ ಅಧ್ಯಕ್ಷರಾದ ಲತ್ತಿಫ್, ಮಹಮ್ಮದ್, ಹನೀಫ್ ಹಮೀದ್  ಅನೇಕ ಮುಖಂಡರು ಭಾಗವಹಿಸಿದರು


Spread the love