ಮಂಗಳೂರಿನ ಒರ್ವ ಬಿಜೆಪಿ ಶಾಸಕ, ಜಿಲ್ಲೆಯ ಆರೋಗ್ಯಾಧಿಕಾರಿ ಮತ್ತು ರೋಗ ಶಾಸ್ತ್ರಜ್ಞ ರಿಗೆ ಕೊರೋನಾ ಪಾಸಿಟಿವ್

Spread the love

ಮಂಗಳೂರಿನ ಒರ್ವ ಬಿಜೆಪಿ ಶಾಸಕ, ಜಿಲ್ಲೆಯ ಆರೋಗ್ಯಾಧಿಕಾರಿ ಮತ್ತು ರೋಗ ಶಾಸ್ತ್ರಜ್ಞ ರಿಗೆ ಕೊರೋನಾ ಪಾಸಿಟಿವ್

ಮಂಗಳೂರು: ಕೊರೋನಾ ಮಹಾಮಾರಿಗೆ ಮಂಗಳೂರಿನ ಒರ್ವ ಬಿಜೆಪಿ ಶಾಸಕ, ಜಿಲ್ಲೆಯ ಆರೋಗ್ಯಾಧಿಕಾರಿ ಮತ್ತು ರೋಗ ಶಾಸ್ತ್ರಜ್ಞ ಒರ್ವರಿಗೆ ಗುರುವಾರ ಕೊರೊನಾ ಪಾಸಿಟಿವ್ ದ್ರಢಗೊಂಡಿದೆ.

ಸೋಂಕಿತರ ಸಂಪರ್ಕದಿಂದ ಶಾಸಕರಿಗೆ ಕೊರೋನಾ ಬಂದಿದೆ ಈ ಸಂಬಂಧ ಸ್ಪಷ್ಟನೆ ನೀಡಿರುವ ಭರತ್ ಶೆಟ್ಟಿ ತಮಗೆ ಕೊರೋನಾ ಪಾಸಿಟಿವ್ ದೃಢವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕೆಲವು ದಿನಗಳಿಂದ ಚಿಕಿತ್ಸೆಯಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. “ನನಗೆ ಕೋವಿಡ್ -19 ದೃಢಪಟ್ಟಿತ್ತು. ನಿಮ್ಮೆಲ್ಲರ ಹಾರೈಕೆಯಿಂದ ನಾನು ಚೇತರಿಸಿಕೊಳ್ಳುತ್ತಿದ್ದೇನೆ ಮತ್ತು ಕೆಲ ದಿನಗಳ ಕಾಲ ಚಿಕಿತ್ಸೆ ಪಡೆಯಲಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

“ಪ್ರತಿಯೊಬ್ಬರೂ ಹೊರ ಹೋದಾಗ ಮಾಸ್ಕ್ ಧರಿಸಿರಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿರಿ ಮತ್ತು ಪದೇ ಪದೆ ಕೈ ತೊಳೆದುಕೊಳ್ಳಿ. ನಿಮ್ಮ ಮತ್ತು ನಿಮ್ಮ ಆಪ್ತರ ಆರೋಗ್ಯ ಕಾಪಾಡಿಕೊಳ್ಳಿ” ಎಂದು ಮನವಿ ಮಾಡಿದ್ದಾರೆ. ಇನ್ನೂ ಭರತ್ ಶೆಟ್ಟಿ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು, ಹೀಗಾಗಿ ಅವರ ಸಂಪರ್ಕದಲ್ಲಿದ್ದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.


Spread the love