ಮಂಗಳೂರು ಬಿಷಪ್ ಡಾ| ಪೀಟರ್ ಪಾವ್ಲ್  ರಾಷ್ಟ್ರೀಯ ಕಥೋಲಿಕ ಕ್ರೈಸ್ತ ಆರಾಧನ ಆಯೋಗದ ಅಧ್ಯಕ್ಷರಾಗಿ ಆಯ್ಕೆ

Spread the love

ಮಂಗಳೂರು ಬಿಷಪ್ ಡಾ| ಪೀಟರ್ ಪಾವ್ಲ್  ರಾಷ್ಟ್ರೀಯ ಕಥೋಲಿಕ ಕ್ರೈಸ್ತ ಆರಾಧನ ಆಯೋಗದ ಅಧ್ಯಕ್ಷರಾಗಿ ಆಯ್ಕೆ

ಮಂಗಳೂರು: 2020, ಫೆಬ್ರವರಿ 13ರಿಂದ 19ರ ತನಕ ಬೆಂಗಳೂರಿನ ಸಂತ ಜಾನ್ಸ್ ಮೆಡಿಕಲ್ ಅಕಾಡೆಮಿಯಲ್ಲಿ ಭಾರತೀಯ ಕಥೋಲಿಕ ಬಿಷಪರ ಮಂಡಳಿಯ 34ನೇ ಸಮಗ್ರ ಸಭೆಯು ನಡೆಯಿತು. ಈ ಸಭೆಯಲ್ಲಿ ‘ಸಂವಾದ – ಪ್ರೀತಿ ಮತ್ತು ಸೌರ್ಹಾದೆತೆಗೆ ದಾರಿ’ ಎಂಬ ವಿಷಯದ ಮೇಲೆ ಸಮಲೋಚನೆ ನಡೆಯಿತು.

ಭಾರತದಲ್ಲಿರುವ 174 ಧರ್ಮಪ್ರಾಂತ್ಯಗಳಿಂದ 193 üಬಿಷಪರುಗಳು ಹಾಗೂ 5 ಕಾರ್ಡಿನಲ್‍ಗಳು ಈ ಸಭೆಯಲ್ಲಿ ಹಾeರಿದ್ದರು. ಈ ಸಭೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ದಾನ್ಹಾರವರನ್ನು ರಾಷ್ಟ್ರೀಯ ಕಥೋಲಿಕ ಕ್ರೈಸ್ತ ಆರಾಧನ ಆಯೋಗದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.


Spread the love