ಮೂವರು ಕ್ರಿಕೆಟ್ ಬುಕ್ಕಿಗಳ ಸೆರೆ

Spread the love

ಮೂವರು ಕ್ರಿಕೆಟ್ ಬುಕ್ಕಿಗಳ ಸೆರೆ

ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಕೇಂದ್ರದ ಮೇಲೆ ದಾಳಿ ನಡೆಸಿ ಮೂವರನ್ನು ಪೊಲೀಸರು ಏಪ್ರೀಲ್ 5 ರಂದು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ವಿಜಯಪುರ ಜಿಲ್ಲೆ ಮುದ್ದೆಬಿಹಾಳ ನಿವಾಸಿ ಹಾಜಿ ಇಸ್ಮಾಯಿಲ್ (26), ಅಡ್ಯಾರ್ ನಿವಾಸಿ ಇಸ್ಮಾಯಿಲ್ (65) ಮತ್ತು ಬೆಳ್ತಂಗಡಿ ನಿವಾಸಿ ಜೊಸೇಫ್ (27) ಎಂದು ಗುರುತಿಸಲಾಗಿದೆ.

ಏಪ್ರೀಲ್ 5 ರಂದು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಉರ್ವ ಠಾಣಾ ಸರಹದ್ದಿನ ಬಿಜೈ ಅನಲಾ ಲಾಡ್ಜ್ ನಲ್ಲಿ ರೂಂ ಒಂದರಲ್ಲಿ ಹಾಜಿ be ಇಸ್ಮಾಯಿಲ್, ಇಸ್ಮಾಯಿಲ್ ಮತ್ತು ಜೋಸೆಫ್ ಎಂಬವರು CRICKET LIVE BUZZ ಎಂಬ Mobile App ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೇಂಜರ್ಸ್ ಬೆಂಗಳೂರು ಮಧ್ಯೆ ನಡೆಯುತ್ತಿರುವ ಐ.ಪಿ.ಎಲ್. ಟಿ20 ಪಂದ್ಯಕ್ಕೆ ಸಂಬಂಧಪಟ್ಟು ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಾ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ದೊರೆತ ಖಚಿತ ವರ್ತಮಾನದಂತೆ ಉರ್ವ ಠಾಣಾ ಪೊಲೀಸ್ ನಿರೀಕ್ಷಕರು ಸದರಿ ಮಾಹಿತಿಯನ್ನು ದಾಖಲಿಸಿಕೊಂಡು ನ್ಯಾಯಾಯಲದಿಂದ ಅನುಮತಿಯನ್ನು ಪಡದುಕೊಂಡು ಫಿರ್ಯಾಧಿದಾರರು ತಿಳಿಸಿದ ಸ್ಳಳಕ್ಕೆ ಜಂಟಿಯಾಗಿ ದಾಳಿ ನಡೆಸಿ ಕ್ರಿಕೇಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿದ್ದ ಹಾಜಿ ಇಸ್ಮಾಯಿಲ್, ಇಸ್ಮಾಯಿಲ್ ಮತ್ತು ಜೋಸೆಫ್ ಎಂಬವರನ್ನು ವಿಚಾರಿಸಿ ಅವರುಗಳು ಕ್ರಿಕೇಟ್ ಬೆಟ್ಟಿಂಗ್ ಅಕ್ರಮ ದಂಧೆಗೆ ಉಪಯೋಗಿಸುತ್ತಿದ್ದ ಮೊಬೈಲ್, ಅವರುಗಳು ಸಾರ್ಜನಿಕರಿಂದ ಅಕ್ರಮ ಬೆಟ್ಟಿಂಗ್ ದಂಧೆಗೆ ಸಂಗ್ರಹಿಸಿದ್ದ ಹಣವನ್ನು ಪಂಚರ ಸಮಕ್ಷಮ ಸ್ವಾಧೀನಪಡಿಸಿಕೊಂಡು ಅವರುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಬಂಧಿತರಿಂದ ಒಟ್ಟು ರೂ. 11620/- ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

ಸದ್ರಿ ಕಾರ್ಯಾಚರಣೆಯು ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಐ.ಪಿ.ಎಸ್. ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರುಗಳಾದ ಹನುಮಂತರಾಯ ಐ.ಪಿ.ಎಸ್. (L&O) ಮತ್ತು ಉಮಾ ಪ್ರಶಾಂತ್ (Crime & Traffic) ಇವರ ಮಾರ್ಗದರ್ಶನದಂತೆ ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಸುಧೀರ್ ಹೆಗ್ಡೆ ಇವರ ನೇತ್ರತ್ವದಲ್ಲಿ ಉರ್ವ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಗುರುಪ್ರಸಾದ್.ಎ, ಪೊಲೀಸ್ ಉಪನಿರೀಕ್ಷಕರಾದ ವನಜಾಕ್ಷಿ.ಕೆ, ಪ್ರೊಫೆಶನರಿ ಪಿ.ಎಸ್.ಐ ಹರೋನ್ ಅಖ್ತರ್ ಹಾಗೂ ಠಾಣಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.


Spread the love