ರಾಜ್ಯ ಆಹಾರ ಆಯೋಗದ ಸದಸ್ಯರಾಗಿ ಬಿ.ಎ. ಮುಹಮ್ಮದ್ ಆಲಿ ನೇಮಕ

Spread the love

ರಾಜ್ಯ ಆಹಾರ ಆಯೋಗದ ಸದಸ್ಯರಾಗಿ ಬಿ.ಎ. ಮುಹಮ್ಮದ್ ಆಲಿ ನೇಮಕ

ಮ0ಗಳೂರು : ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾಗಿ ಬಿ.ಎ. ಮಹಮ್ಮದ್ ಆಲಿ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಆಹಾರ ಆಯೋಗದ ಸದಸ್ಯರಾಗಿ ಮಾಜಿ ಶಾಸಕ ದಿವಂಗತ ಬಿ.ಎ. ಉಮರಬ್ಬ ಅವರ ಸಹೋದರ, ನವ ಮಂಗಳೂರು ಬಂದರು ಮಂಡಳಿಯ ನಿವೃತ್ತ ಅಧೀಕ್ಷಕರಾಗಿ ಬಿ.ಎ. ಮಹಮ್ಮದ್ ಆಲಿ ನಿವೃತ್ತರಾಗಿದ್ದಾರೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013 ಅಧಿನಿಯಮ 16ರ ಪ್ರಕಾರ ಸ್ವತಂತ್ರ ರಾಜ್ಯ ಆಹಾರ ಆಯೋಗ ರಚಿಸಲಾಗಿದ್ದು, ಅಧ್ಯಕ್ಷರಾಗಿ ಬೆಂಗಳೂರು ನಾಗರಬಾವಿಯ ಡಾ.ಎನ್.ಕೃಷ್ಣಮೂರ್ತಿ, ಸದಸ್ಯರಾಗಿ ಮಂಗಳೂರಿನ ಬಿ.ಎ. ಮಹಮ್ಮದ್ ಆಲಿ ಅವರಲ್ಲದೆ ಜಯಮಹಲ್‍ನ ಬಿ.ವಿ. ಪಾಟೇಲ್, ಜುಡಿಷಿಯಲ್ ಲೇಔಟ್ ನ ಹೆಚ್.ವಿ. ಶಿವಶಂಕರ, ಸಹಕಾರ ನಗರದ ಡಿ.ಜಿ. ಹಸಬಿ, ಕಲಬುರುಗಿಯ ಮಂಜುಳ ಹಾಗೂ ಪದನಿಮಿತ್ತ ಸದಸ್ಯ ಕಾರ್ಯದರ್ಶಿಯಾಗಿ ಆಹಾರ, ನಾಗರಿಕ, ಗ್ರಾಹಕ ಇಲಾಖೆಯ ಅನೌಪಚಾರಿಕ ಪಡಿತರ ಪ್ರದೇಶದ ಅಪರ ನಿರ್ದೇಶಕರನ್ನು ಕರ್ನಾಟಕ ಸರ್ಕಾರ ಆಯ್ಕೆ ಮಾಡಿದೆ.


Spread the love