ರೋಹನ್ ಕಾರ್ಪೊರೇಷನ್ನಿಂದ ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಪುನರ್ ವ್ಯಾಖ್ಯಾನ: ಶಾರುಖ್ ಖಾನ್ ರಾಯಭಾರಿ
ಮಂಗಳೂರು: ಕರ್ನಾಟಕದ ರಿಯಲ್ ಎಸ್ಟೇಟ್ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು. ಮಂಗಳೂರಿನ ಪ್ರಮುಖ ಬಿಲ್ಡರ್ಗಳಲ್ಲಿ ಒಂದಾದ ರೋಹನ್ ಕಾರ್ಪೊರೇಷನ್, ಬಾಲಿವುಡ್ನ ಸೂಪರ್ಸ್ಟಾರ್ ಶಾರುಖ್ ಖಾನ್ ಅವರನ್ನು ಕರ್ನಾಟಕ ರಾಜ್ಯದ ತಮ್ಮ ಅಧಿಕೃತ ಬ್ರಾಂಡ್ ರಾಯಭಾರಿಯಾಗಿ ನೇಮಿಸಿಕೊಂಡಿದೆ.
ಮಂಗಳೂರಿನಲ್ಲಿ ಸ್ಥಾಪಿತವಾದ ರೋಹನ್ ಕಾರ್ಪೊರೇಷನ್, ಕಳೆದ ಮೂರು ದಶಕಗಳಿಂದ ವಿಶ್ವಾಸಾರ್ಹತೆ, ಗುಣಮಟ್ಟ ಮತ್ತು ಶ್ರೇಷ್ಠತೆಗೆ ಹೆಸರುವಾಸಿಯಾಗಿದೆ. ಹಿಲ್ ಕ್ರೆಸ್ಟ್, ಹೈ ಕ್ರೆಸ್ಟ್, ರೋಹನ್ ಸಿಟಿ ಮತ್ತು ರೋಹನ್ ಸ್ಕ್ವೇರ್ನಂತಹ ಯಶಸ್ವಿ ಯೋಜನೆಗಳ ಮೂಲಕ ಮಂಗಳೂರಿನ ಗಗನಚುಂಬಿ ಕಟ್ಟಡಗಳ ನಿರ್ಮಾಣದಲ್ಲಿ ಕಂಪನಿಯು ಪ್ರಮುಖ ಪಾತ್ರ ವಹಿಸಿದೆ. ಈ ಯೋಜನೆಗಳು ಆಧುನಿಕತೆ ಮತ್ತು ಸಮುದಾಯ ಆಧಾರಿತ ನಗರ ಜೀವನದ ಕಲ್ಪನೆಯನ್ನು ಬಿಂಬಿಸುತ್ತವೆ.
ಶಾರುಖ್ ಖಾನ್ ಅವರೊಂದಿಗಿನ ಈ ಸಹಭಾಗಿತ್ವವು ಶ್ರೇಷ್ಠತೆ, ನಾವೀನ್ಯತೆ ಮತ್ತು ಸಮುದಾಯ ನಿರ್ಮಾಣದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದು ರೋಹನ್ ಕಾರ್ಪೊರೇಷನ್ನ ಮೂಲ ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ. ೨೫ ಯಶಸ್ವಿ ಯೋಜನೆಗಳನ್ನು ಪೂರ್ಣಗೊಳಿಸಿರುವ ಮತ್ತು ಸುಸ್ಥಿರ ಅಭಿವೃದ್ಧಿ ಹಾಗೂ ಗ್ರಾಹಕರ ತೃಪ್ತಿಗೆ ನಿರಂತರವಾಗಿ ಬದ್ಧವಾಗಿರುವ ಈ ಕಂಪನಿಯು, ಕರ್ನಾಟಕದ ರಿಯಲ್ ಎಸ್ಟೇಟ್ ವಲಯದಲ್ಲಿ ಹೊಸ ಛಾಪು ಮೂಡಿಸಲು ಸಜ್ಜಾಗಿದೆ.
ರೋಹನ್ ಕಾರ್ಪೊರೇಷನ್ನ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಡಾ. ರೋಹನ್ ಮಾಂಟೆರಿಯೋ ಅವರು ಈ ಕುರಿತು ಮಾತನಾಡುತ್ತಾ, “ಶಾರುಖ್ ಖಾನ್ ಅವರು ರೋಹನ್ ಕಾರ್ಪೊರೇಷನ್ಗೆ ಕೇವಲ ಪಾಲುದಾರರಲ್ಲ, ಇದು ನಮ್ಮ ಕನಸು ಮತ್ತು ಬದ್ಧತೆಯ ಸಂಗಮ. ಶಾರುಖ್ ಖಾನ್ ತಮ್ಮ ಪರಿಶ್ರಮ ಮತ್ತು ಬದ್ಧತೆಯಿಂದ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದಂತೆ, ರೋಹನ್ ಕಾರ್ಪೊರೇಷನ್ ಕೂಡ ಜನರ ಜೀವನವನ್ನು ಉತ್ತಮಗೊಳಿಸುವ ಮೂಲಕ ಸ್ಫೂರ್ತಿ ನೀಡಲು ಬಯಸಿದೆ. ಅವರನ್ನು ನಮ್ಮೊಂದಿಗೆ ಹೊಂದುವ ಮೂಲಕ, ಕರ್ನಾಟಕ ಮತ್ತು ಅದರ ಹೊರಗೂ ನಗರ ಜೀವನವನ್ನು ಮರುವ್ಯಾಖ್ಯಾನಿಸುವ ನಮ್ಮ ಗುರಿಗೆ ನಾವು ಬದ್ಧರಾಗಿದ್ದೇವೆ” ಎಂದರು.
ಶಾರುಖ್ ಖಾನ್ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ, “ನನ್ನ ಪರಿಶ್ರಮ, ನಾವೀನ್ಯತೆ ಮತ್ತು ಹೃದಯವನ್ನು ಪ್ರತಿಬಿಂಬಿಸುವ ಬ್ರ್ಯಾಂಡ್ ಆಗಿರುವ ರೋಹನ್ ಕಾರ್ಪೊರೇಷನ್ನೊಂದಿಗೆ ಕೈಜೋಡಿಸುತ್ತಿರುವುದು ನನಗೆ ಸಂತೋಷ ತಂದಿದೆ. ಸುಸ್ಥಿರ ಮತ್ತು ಸಮುದಾಯ ಆಧಾರಿತ ಸ್ಥಳಗಳ ಬಗ್ಗೆ ನನಗೂ ಆಸಕ್ತಿಯಿದೆ. ನಾಳಿನ ನಗರಗಳನ್ನು ಹೃದಯ ಮತ್ತು ದೃಷ್ಟಿಯೊಂದಿಗೆ ರೂಪಿಸುವ ಈ ಅದ್ಭುತ ಪಯಣದ ಭಾಗವಾಗಲು ನಾನು ಕಾತರದಿಂದ ಕಾಯುತ್ತಿದ್ದೇನೆ” ಎಂದು ಹೇಳಿದರು.
ನಗರ ಜೀವನವನ್ನು ಪ್ರಕೃತಿಯೊಂದಿಗೆ ಬೆಸೆಯುವ ದೃಢವಾದ ದೃಷ್ಟಿಯನ್ನು ಹೊಂದಿರುವ ರೋಹನ್ ಕಾರ್ಪೊರೇಷನ್, ಪರಿಸರವನ್ನು ಸಂರಕ್ಷಿಸುವ ಜೊತೆಗೆ ಉತ್ತಮ ಗುಣಮಟ್ಟದ ಜೀವನವನ್ನು ನೀಡುವ ಸಮುದಾಯಗಳನ್ನು ನಿರ್ಮಿಸಲು ಶ್ರಮಿಸುತ್ತಿದೆ. ಅತ್ಯುತ್ತಮ ವಿನ್ಯಾಸ, ಉನ್ನತ ನಿರ್ಮಾಣ ಗುಣಮಟ್ಟ ಮತ್ತು ಗ್ರಾಹಕರ ಸಂತೋಷದ ಮೇಲೆ ನಿರಂತರ ಗಮನವನ್ನು ಕೇಂದ್ರೀಕರಿಸುವ ಮೂಲಕ ಅಸಾಧಾರಣ ಮೌಲ್ಯವನ್ನು ನೀಡುವುದು ಕಂಪನಿಯ ಮುಖ್ಯ ಗುರಿಯಾಗಿದೆ.
ಸಮಗ್ರತೆ, ಶ್ರೇಷ್ಠತೆ, ನಾವೀನ್ಯತೆ ಮತ್ತು ಸುಸ್ಥಿರತೆಯಂತಹ ಪ್ರಮುಖ ಮೌಲ್ಯಗಳೊಂದಿಗೆ, ಶಾರುಖ್ ಖಾನ್ ಅವರೊಂದಿಗಿನ ರೋಹನ್ ಕಾರ್ಪೊರೇಷನ್ನ ಈ ಪಾಲುದಾರಿಕೆಯು ಹೊಸ ಕ್ರಿಯಾತ್ಮಕ ಬೆಳವಣಿಗೆಯಾಗಿದ್ದು, ವ್ಯಾಪಕವಾದ ತೊಡಗಿಸಿಕೊಳ್ಳುವಿಕೆ ಮತ್ತು ಬಲವಾದ ಬ್ರ್ಯಾಂಡ್ ಅಸ್ತಿತ್ವದ ಹೊಸ ಯುಗದ ಆರಂಭವಾಗಿದೆ. ಇದು ಕರ್ನಾಟಕದಾದ್ಯಂತ ಕನಸುಗಾರರು ಮತ್ತು ಮನೆ ಮಾಲೀಕರ ಹೊಸ ಪೀಳಿಗೆಗೆ ಸ್ಫೂರ್ತಿಯಾಗಲಿದೆ.