ಲಾಕ್ ಡೌನ್ :  ಅನಗತ್ಯ ಸಂಚಾರ ಕಂಡು ಬಂದರೆ ಖಾಸಗಿ ವಾಹನ ಸಂಚಾರ ಸಂಪೂರ್ಣ ಬ್ಯಾನ್ – ಡಿಸಿ ಜಗದೀಶ್ ಎಚ್ಚರಿಕೆ

Spread the love

ಲಾಕ್ ಡೌನ್ :  ಅನಗತ್ಯ ಸಂಚಾರ ಕಂಡು ಬಂದರೆ ಖಾಸಗಿ ವಾಹನ ಸಂಚಾರ ಸಂಪೂರ್ಣ ಬ್ಯಾನ್ – ಡಿಸಿ ಜಗದೀಶ್ ಎಚ್ಚರಿಕೆ

ಉಡುಪಿ: ಲಾಕ್ ಡೌನ್ ಸಮಯದಲ್ಲಿ ಅನಗತ್ಯ ವಾಹನ ಸಂಚಾರ ಕಂಡು ಬಂದರೆ ಅಂತಹ ವಾಹನಗಳನ್ನು ಯಾವುದೇ ಮುಲಾಜಿಲ್ಲದೆ ಜಫ್ತಿ ಮಾಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಬೆಳಿಗ್ಗೆ 7 ರಿಂದ 11 ಗಂಟೆಯವರಗೆ ಅವಶ್ಯಕ ವಸ್ತು ಖರೀದಿಗೆ ಅವಕಾಶ ನೀಡಿದ್ದು ಈ ಸಮಯಲ್ಲಿ ಅಡ್ಡಾದಿಟ್ಟಿಯಾಗಿ ರಸ್ತೆಯಲ್ಲಿ ಜನ ಸಂಚಾರ ಇರುವುದು ನನ್ನ ಗಮನಕ್ಕೆ ಬಂದಿದೆ . ಈ ರೀತಿಯಲ್ಲಿ ನಾಳೆಯೂ ಮುಂದುವರೆದಲ್ಲಿ ಖಂಡಿತವಾಗಿ ಅಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವುದರೊಂದಿಗೆ ಸಂಪೂರ್ಣ ಖಾಸಗಿ ವಾಹನ ಸಂಚಾರವನ್ನೆ ನಿಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


Spread the love