ವಿನಯ್ ಕುಮಾರ್ ಸೊರಕೆ ಪರ ಕಾಪುವಿನಲ್ಲಿ ಪುತ್ರ ದ್ವಿಶಾನ್ ಮತ ಯಾಚನೆ

Spread the love

ವಿನಯ್ ಕುಮಾರ್ ಸೊರಕೆ ಪರ ಕಾಪುವಿನಲ್ಲಿ ಪುತ್ರ ದ್ವಿಶಾನ್ ಮತ ಯಾಚನೆ

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ವಿನಯ್ ಕುಮಾರ್ ಸೊರಕೆ ಅವರ ಪರವಾಗಿ ಅವರ ಪುತ್ರ ದ್ವಿಶಾನ್ ಸೊರಕೆಯವರು ಕಾಪು ಪುರಸಭಾ ವ್ಯಾಪ್ತಿಯಲ್ಲಿ ಸೋಮವಾರ ಮತಯಾಚನೆ ಮಾಡಿದರು.

ತಮ್ಮ ತಂದೆಯವರ ಪರ ಮತಯಾಚನೆ ಮಾಡಿದ ದ್ವಿಶಾನ್ ಮತ್ತೊಮ್ಮೆ ತಮ್ಮ ತಂದೆಯನ್ನು ಗೆಲ್ಲಿಸುವಂತೆ ಮನವಿ ಮಾಡಿಕೊಂಡರು.

ಈ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವಾಸ್ ವಿ ಅಮೀನ್, ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಬಹುಭಾಷಾ ಚಿತ್ರ ನಟಿ ಚಿರಾಶ್ರೀ ಅಂಚನ್ , ಕಾಪು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ ,ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಮಜೂರ್, ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೆಲ್ವಿನ್ ಡಿಸೋಜಾ ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಸಂತೋಶ್ ಬಂಗೇರ, ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ನಿಯಾಝ್ ,ಪ್ರಭಾಕರ ಆಚಾರ್ಯ, ಹಮ್ರಝ್, ಕಾಪು ಪುರಸಭೆ ವ್ಯಾಪ್ತಿಯ ಅಧ್ಯಕ್ಷರಾದ ದಿಲ್ದರ್ ಶೇಕ್, ಕಾಂಗ್ರೆಸ್ ನಾಯಕರಾದ ,ದಿವಾಕರ್ ಶೆಟ್ಟಿ ,ಅಶೋಕ್ ಕೊಡವೂರ್ , ದಿನೇಶ್ ಕೋಟ್ಯಾನ್, ಹುಸ್ಮಾನ್ ಕಾಪು, ಕರುಣಾಕರ ಪಡುಬಿದ್ರಿ, ಹಸನ್ ಬಾವ ಕಂಚಿನಡ್ಕ, ಗಣೇಶ್ ಕೋಟ್ಯಾನ್ ಪಡುಬಿದ್ರಿ , ದೀಪಕ್ ಎರ್ಮಲ್ ,ಹರೀಶ್ ನಾಯಕ್ ಮತ್ತು ಹೆಚ್ಚಿನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಂತಾದವರು ಉಪಸ್ಥಿತರಿದ್ದರು.


Spread the love