ಮಂಗಳೂರು: ಜೈಲು ಸಿಬ್ಬಂದಿಯ ಜಾಮೀನು ಅರ್ಜಿ ವಜಾ

Spread the love

ಮಂಗಳೂರು: ಜೈಲು ಸಿಬ್ಬಂದಿಯ ಜಾಮೀನು ಅರ್ಜಿ ವಜಾ

ಮಂಗಳೂರು: ದ.ಕ. ಜಿಲ್ಲಾ ಕಾರಾಗೃಹದ ಕೈದಿಗೆ ಗಾಂಜಾ ನೀಡಲು ಯತ್ನಿಸಿ ಸಿಕ್ಕಿಬಿದ್ದ ಜೈಲಿನ ವಾರ್ಡನ್ ಸಂತೋಷ್ ಹೊಸಮನಿ ಮತ್ತು ಗಾಂಜಾ, ಮತ್ತಿತರ ವಸ್ತುಗಳನ್ನು ನೀಡಿದ್ದಾನೆ ಎನ್ನಲಾದ ಆರೋಪಡಿ ಬಂಧಿತನಾಗಿರುವ ಜಯಪ್ರಕಾಶ್ ಬಂಗೇರನ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಈ ಇಬ್ಬರು ಆರೋಪಿಗಳು ಮಂಗಳೂರಿನ ಆರನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಶಶಿಕಲಾ ಜಿ. ಆರೋಪಿಗಳ ಜಾಮೀನನ್ನು ವಜಾಗೊಳಿಸಿದ್ದಾರೆ.

ಸರಕಾರದ ಪರವಾಗಿ ಎಪಿಪಿ ಆರೋನ್ ಡಿಸೋಜ ವಿಟ್ಲ ವಾದ ಮಂಡಿಸಿದ್ದರು.


Spread the love
Subscribe
Notify of

0 Comments
Inline Feedbacks
View all comments