ಕಟಪಾಡಿ ಏಣಗುಡ್ಡೆಯಲ್ಲಿ ಸಿಡಿಲು ಬಡಿದು   ಯುವಕ ಸಾವು

Spread the love

ಕಟಪಾಡಿ ಏಣಗುಡ್ಡೆಯಲ್ಲಿ ಸಿಡಿಲು ಬಡಿದು   ಯುವಕ ಸಾವು

ಉಡುಪಿ: ಭಾನುವಾರ ಸಂಜೆ ಗುಡುಗು – ಸಿಡಿಲಬ್ಬರಕ್ಕೆ ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ಕಾಪು ತಾಲೂಕಿನ ಕಟಪಾಡಿ ಏಣಗುಡ್ಡೆಯಲ್ಲಿ ಸಂಭವಿಸಿದೆ.

ಮೃತ ಯುವಕನನ್ನು  ಕಟಪಾಡಿ ಜೆ.ಎನ್. ನಗರ ಪಡು  ಏಣಗುಡ್ಡೆ ನಿವಾಸಿ ಸುರೇಶ್ ಅವರ  ಪುತ್ರ ಭರತ್ (22)ಎಂದು ಗುರುತಿಸಲಾಗಿದೆ.

ಭಾನುವಾರ ಸಂಜೆ ಮಳೆಯೊಂದಿಗೆ ಭೀಕರ ಗುಡುಗು ಮತ್ತು ಸಿಡಿಲು ಕೂಡ ಇದ್ದು ಈ ವೇಳೆ ಮನೆಯಲ್ಲಿ ಕುಳಿತಿದ್ದ ವೇಳೆ ಮನೆಗೆ ಸಿಡಿಲು ಬಡಿದಿದ್ದು ಇದರಿಂದ ಆಘಾತಗೊಂಡ ಭರತನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ಮೃತಪಟ್ಟಿದ್ದಾನೆ.

ಮೃತ ಯುವಕ ಭರತ್ ತಂದೆ, ತಾಯಿ ಹಾಗೂ ತಂಗಿಯನ್ನು ಅಗಲಿದ್ದಾರೆ.

ಕಾಪು ಠಾಣೆಯ ಠಾಣಾಧಿಕಾರಿ ರಾಜ್ ಶೇಖರ್ ಸಾಗನೂರ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.


Spread the love