32.5 C
Mangalore
Saturday, April 25, 2026

ಗೌರಿ ಲಂಕೇಶ್ ಹತ್ಯೆ: ಉಡುಪಿ ಜಿಲ್ಲಾ ಎನ್.ಎಸ್‌.ಯು.ಐ ಖಂಡನೆ

ಗೌರಿ ಲಂಕೇಶ್ ಹತ್ಯೆ: ಉಡುಪಿ ಜಿಲ್ಲಾ ಎನ್.ಎಸ್‌.ಯು.ಐ ಖಂಡನೆ ಉಡುಪಿ: ರಾಜ್ಯದ ಹಿರಿಯ ಪತ್ರಕರ್ತೆ ಹಾಗು ಪ್ರಗತಿಪರ ಚಿಂತಕಿಯಾಗಿದ್ದ ಗೌರಿ ಲಂಕೇಶ್ ಅವರ ಹತ್ಯೆಯನ್ನು ಉಡುಪಿ ಜಿಲ್ಲಾ ಎನ್.ಎಸ್‌.ಯು.ಐ ತೀವ್ರವಾಗಿ ಖಂಡಿಸಿದೆ. ಈ ಕುರಿತು ಮಾಧ್ಯಮ ಹೇಳಿಕೆ...

ದೇಯಿ ಬೈದೆತಿಗೆ ಅವಮಾನ ಮಾಡಿದ ವ್ಯಕ್ತಿಯ ಬಂಧನ

ದೇಯಿ ಬೈದೆತಿಗೆ ಅವಮಾನ ಮಾಡಿದ ವ್ಯಕ್ತಿಯ ಬಂಧನ ಮಂಗಳೂರು: ತುಳುನಾಡಿನ ಅವಳಿ ವೀರ ಕಾರಣಿಕ ಪುರಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿಯವರನ್ನು ಅವಮಾನಿಸಿದ ಪ್ರಕರಣಕ್ಕೆ ಸಂಬಂಧೀಸಿ ಹನೀಫ್ ಈಶ್ವರಮಂಗಲ ಎಂಬಾತನನ್ನು ಸಂಪ್ಯ ಠಾಣಾ...

ಉಡುಪಿಯಲ್ಲಿ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ 50 ಕೋಟಿ ವ್ಯಯ – ಪ್ರಮೋದ್ ಮಧ್ವರಾಜ್

ಉಡುಪಿಯಲ್ಲಿ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ 50 ಕೋಟಿ ವ್ಯಯ - ಪ್ರಮೋದ್ ಮಧ್ವರಾಜ್ ಉಡುಪಿ : ಉಡುಪಿಯಲ್ಲಿ ಒಂದು ವರ್ಷದ ಅವಧಿಯಲ್ಲಿ 50 ಕೋಟಿ ರೂ ವೆಚ್ಚದಲ್ಲಿ 5 ಸುಸುಜ್ಜಿತ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು...

ಕಟಪಾಡಿ: ಲಾರಿ – ಬೈಕ್ ಅಫಘಾತ ಬಾಲಕಿ ಸ್ಥಳದಲ್ಲೇ ಸಾವು

ಕಟಪಾಡಿ: ಲಾರಿ  - ಬೈಕ್ ಅಫಘಾತ ಬಾಲಕಿ ಸ್ಥಳದಲ್ಲೇ ಸಾವು ಉಡುಪಿ: ಲಾರಿಯೊಂದು ಬೈಕ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ 11 ವರುಷದ ಬಾಲಕಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಕಟಪಾಡಿಯ ರಾಷ್ಟ್ರೀಯ...

ತಾಯಿ ದೇಯಿ ಬೈದೇತಿ ಮೂರ್ತಿಯನ್ನು ಅಸಹ್ಯಕರ ರೀತಿಯಲ್ಲಿ ಸ್ಪರ್ಪಿಸಿ ಅವಮಾನ; ಹಿಂಜಾವೇ ಖಂಡನೆ

ತಾಯಿ ದೇಯಿ ಬೈದೇತಿ ಮೂರ್ತಿಯನ್ನು ಅಸಹ್ಯಕರ ರೀತಿಯಲ್ಲಿ ಸ್ಪರ್ಪಿಸಿ ಅವಮಾನ; ಹಿಂಜಾವೇ ಖಂಡನೆ ಮಂಗಳೂರು: ಪಡುಮಲೆಯ ತಾಯಿ ದೇಯಿ ಬೈದೇತಿಯ ಪರಮ ಪವಿತ್ರ ಕ್ಷೇತ್ರದಲ್ಲಿ ತಾಯಿಯ ಮೂರ್ತಿಯನ್ನು ಅಸಹ್ಯಕರವಾದ ರೀತಿಯಲ್ಲಿ  ಸ್ಪರ್ಷಿಸಿ,ಆ ಚಿತ್ರವನ್ನು ಸಾಮಾಜಿಕ...

ಬ್ಯಾಂಕ್ ನಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಅನ್ಯಾಯ ಕರವೇ ಪ್ರತಿಭಟನೆ, ಬಂಧನ

ಬ್ಯಾಂಕ್ ನಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಅನ್ಯಾಯ ಕರವೇ ಪ್ರತಿಭಟನೆ, ಬಂಧನ ಮಂಗಳೂರು: ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ನಡೆಯುತ್ತಿರುವ ಪರೀಕ್ಷಾ ಕೇಂದ್ರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ...

ವಿದ್ಯಾರ್ಥಿಸ್ನೇಹಿ ಪೋಲಿಸ್ ಆಗುವತ್ತ ಒಂದು ಹೆಜ್ಜೆ; ಶಾಲೆಗಳಲ್ಲಿ ಕಾನೂನು ಪಾಠ ಮಾಡಿದ ಅಧಿಕಾರಿಗಳು

ವಿದ್ಯಾರ್ಥಿಸ್ನೇಹಿ ಪೋಲಿಸ್ ಆಗುವತ್ತ ಒಂದು ಹೆಜ್ಜೆ; ಶಾಲೆಗಳಲ್ಲಿ ಕಾನೂನು ಪಾಠ ಮಾಡಿದ ಅಧಿಕಾರಿಗಳು   ಉಡುಪಿ: ಪೋಲಿಸ್ ವ್ಯವಸ್ಥೆಯನ್ನು ಜನಸ್ನೇಹಿ ಹಾಗೂ ವಿದ್ಯಾರ್ಥಿಸ್ನೇಹಿಯಾಗುವತ್ತ ಹಿಂದಿನ ಪೋಲಿಸ್ ವರಿಷ್ಠಾಧಿಕಾರಿಯಾಗಿದ್ದ ಕೆ. ಅಣ್ಣಾಮಲೈ ಅವರು ಶಾಲೆಗಳಲ್ಲಿ ವಿದ್ಯಾರ್ಥಿಗಳೊಂದಿಗೆ...

ಮೆಡಿಕಲ್ ಸೀಟ್ ಕೊಡಿಸುವುದಾಗಿ ಮೋಸ ಮಾಡಿದ 10 ಮಂದಿಯ ಬಂಧನ

ಮೆಡಿಕಲ್ ಸೀಟ್ ಕೊಡಿಸುವುದಾಗಿ ಮೋಸ ಮಾಡಿದ 10 ಮಂದಿಯ ಬಂಧನ ಮಂಗಳೂರು: ವಿದ್ಯಾರ್ಥೀಗಳಿಗೆ ಎಜೆ ಆಸ್ಪತ್ರೆಯಲ್ಲಿ ಎಂ.ಬಿ.ಬಿ.ಎಸ್. ಸೀಟು ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಮೋಸ ಮಾಡಿದ ಬೃಹತ್ ಜಾಲದ ಹತ್ತು ಮಂದಿಯನ್ನು ಕದ್ರಿ...

ಸೆ. 11: ಹೆಜಮಾಡಿಯಿಂದ ಕಾಪುವರೆಗೆ ಬಿಜೆಪಿ ಪಾದಯಾತ್ರೆ

ಸೆ. 11: ಹೆಜಮಾಡಿಯಿಂದ ಕಾಪುವರೆಗೆ ಬಿಜೆಪಿ ಪಾದಯಾತ್ರೆ ಉಡುಪಿ: ರಾಜ್ಯ ಸರಕಾರ 94ಸಿ ಹಾಗೂ 94ಸಿಸಿ ಅಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ...

ಅಪಘಾತ ಪರಿಹಾರ ಮೊತ್ತ ಕಾನೂನು ಹೋರಾಟದಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಗೆ ಗೆಲುವು

ಅಪಘಾತ ಪರಿಹಾರ ಮೊತ್ತ ಕಾನೂನು ಹೋರಾಟದಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಗೆ ಗೆಲುವು ಮಸ್ಕತ್:ಒಮನ್ ರಾಜಧಾನಿ ಮಸ್ಕತ್ ಗೆ ಸಮೀಪದ ಸೂರ್ ಜಾಲಾನ್ ಎಂಬಲ್ಲಿಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಂಟ್ವಾಳದ ಮುಸ್ತಫಾ ಎಂಬ ಯುವಕನ ಕುಟುಂಬಕ್ಕೆ ಪರಿಹಾರಮೊತ್ತ ಬಿಡುಗಡೆಗೊಳಿಸುವಲ್ಲಿ ಕೊನೆಗೂ ಇಂಡಿಯನ್ ಸೋಶಿಯಲ್ ಫೋರಮ್ ಮಸ್ಕತ್ ಕರ್ನಾಟಕ ಚಾಪ್ಟರ್ ಯಶಸ್ವಿಯಾಗಿದೆ. ನಿರಂತರ ಎರಡು ವರ್ಷಗಳ ಕಾಲ ಇಂಡಿಯನ್ ಸೋಶಿಯಲ್ ಫೋರಮ್ನಡೆಸಿದ ಕಾನೂನು ಹೋರಾಟದ ಫಲವಾಗಿ ಅನಾಥವಾಗಿದ್ದ ಕುಟುಂಬಕ್ಕೆ ಪರಿಹಾರ ಮೊತ್ತವಾಗಿ25,16,866 ರೂಪಾಯಿಗಳ ಚೆಕ್ ಹಸ್ತಾಂತರವಾಗಿದೆ. 2017ರ ಆಗಸ್ಟ್ 31ರಂದು ಪರಿಹಾರ ಮೊತ್ತದಚೆಕ್ ಕೈ ಸೇರಿರುವುದಾಗಿ ಮೃತ ಮುಸ್ತಫಾರವರ ತಾಯಿ ಬೀಫಾತಿಮಾ ಅವರು ಇಂಡಿಯನ್ ಸೋಶಿಯಲ್ಫೋರಮ್ ನಿಯೋಗಕ್ಕೆ ಖಾತರಿಪಡಿಸಿದ್ದಾರೆ. ಮೃತ ಮುಹಮ್ಮದ್ ಮುಸ್ತಾಫ ಮೂವರು ಸಹೋದರಿ ಮತ್ತು ಅಸ್ವಸ್ಥೆ ತಾಯಿಯನ್ನು ಹೊಂದಿದ್ದರು. ತೀರಾಬಡ ಕುಟುಂಬದ ಏಕೈಕ ಆಸರೆಯಾಗಿದ್ದ ಮುಸ್ತಫಾ ಉದ್ಯೋಗಕ್ಕಾಗಿ ಒಮನ್ ನ ಮಸ್ಕತ್ ಗೆ ಬಂದಿದ್ದರು. 2015ರಲ್ಲಿ ಅವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಸರಕಾರಿರಜೆ ಇದ್ದರೂ ಇಂಡಿಯನ್ ಸೋಶಿಯಲ್ ಫೋರಮ್ ನ ಕ್ಷಿಪ್ರ ಕಾರ್ಯಾಚರ್ಣೆಯಿಂದಾಗಿ ಎರಡುದಿನಗಳೊಳಗಾಗಿ ಮೃತದೇಹವು ತವರೂರಾದ ಪರ್ಲಿಯಾಕ್ಕೆ ತಲುಪಿತ್ತು. ಮೃತರ ಪರಿಹಾರ ಮೊತ್ತಕ್ಕಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಇಂಡಿಯನ್ ಸೋಶಿಯಲ್ ಫೋರಮ್ನಿರಂತರವಾಗಿ ಅಧಿಕಾರಿಗಳನ್ನು, ರಾಯಭಾರಿ ಕಚೇರಿಯನ್ನು ಹಾಗೂ ವಿಮಾ ಕಂಪೆನಿಯ ವಕೀಲರನ್ನು  ಸಂಪರ್ಕಿಸಿ ಕಾನೂನು ಹೋರಾಟವನ್ನು ನಡೆಸಿತ್ತು. ಅದೇ ರೀತಿ ಊರಿನಿಂದಲೂ ಅದಕ್ಕೆ ಬೇಕಾದದಾಖಲೆಗಳನ್ನೂ ತರಿಸಿಕೊಂಡು ಪರಿಹಾರ ಮೊತ್ತ ಪಡೆಯುವಲ್ಲಿ ಸಾಕಷ್ಟು ಪರಿಶ್ರಮ ವಹಿಸಿತ್ತು. ಇದೀಗಇಂಡಿಯನ್ ಸೋಶಿಯಲ್ ಫೋರಮ್ ನ ನಿರಂತರ ಪರಿಶ್ರಮಕ್ಕೆ ಜಯ ಸಿಕ್ಕಿದೆ. ಇಂಡಿಯನ್ ಸೋಶಿಯಲ್ ಫೋರಮ್ ನ ಕಾನೂನು ಹೋರಾಟದ ನಿಯೋಗದಲ್ಲಿ ನಝೀರ್ ಕೋಡಿಂಬಾಡಿ, ಅನ್ವರ್ ಮೂಡಬಿದ್ರೆ ಹಾಗೂ ಸಲಾಮ್ ತುಂಬೆ ಸಹಕರಿಸಿದ್ದರು.

Members Login

Obituary

Congratulations